Posts

Showing posts from September, 2010
Image
-ಹಳಿಗಳ ಮೇಲೆ ಹೆಣವಾಯಿತು ಗಜ ಪಡೆ- .ಸೆಪ್ಟೆಂಬರ್ 22 ರಾತ್ರಿ ಪಶ್ಚಿಮ ಬಂಗಾಳದ Binnaguri ಹಾಗು Banarhat ರೈಲ್ವೆ stations ವ್ಯಾಪ್ತಿಯಲ್ಲಿ 7 ಆನೆಗಳು ವೇಗವಾಗಿ ಚಲಿಸುತ್ತಿದ್ದ ಗೂಡ್ಸ್ ರೈಲಿಗೆ ಸಿಕ್ಕಿ ದಾರುಣವಾಗಿ ಮೃತಪಟ್ಟಿವೆ .ಹಳಿಗಳನ್ನು ದಾಟುತ್ತಿದ್ದ ಆನೆಗಳ ಹಿಂಡ್ಡಿನಲ್ಲಿದ್ದ ಎರಡು ಮರಿ ಆನೆಗಳ ಕಾಲುಗಳು ಹಳಿಗಳ ನಡುವೆ ಸಿಕ್ಕಿ ಹಾಕಿಕೊಂಡಿದೆ.ಅದನ್ನು ಬಿಡಿಸಲು ಉಳಿದ ಆನೆಗಳು ಪ್ರಯತ್ನ ಪಡುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಗೂಡ್ಸ್ ರೈಲು ಆನೆಗಳಿಗೆ ಹೊಡೆದ ಪರಿಣಾಮ 7 ಆನೆಗಳು ಮೃತಪಟ್ಟಿವೆ .ರೈಲ್ವೆ ಇಲಾಖೆ ಅದಿಕಾರಿಗಳ ಪ್ರಕಾರ ಅವರಿಗೆ ಅಂದು ಆನೆಗಳ ಹಿಂಡು 'denotified' area ದಲ್ಲಿ ಸಂಚರಿಸುತ್ತಿದ್ದ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಯಾವುದೇ ಮಾಹಿತಿ ಇರಲಿಲ್ಲ .ಸಾಧಾರಣವಾಗಿ ‘ notified forested area ’ ಅಥವಾ ‘ elephant corridor ’ ಗಳಲ್ಲಿ ರೈಲುಗಳು ನಿಧಾನವಾಗಿ,ಹಾಗು ಪ್ರಾಣಿಗಳಿಗೆ ಎಚ್ಚರಿಕೆ ನೀಡಲು whistle ಮಾಡುತ್ತಾ ಸಂಚರಿಸುತ್ತವೆ .ಈ ೭ ಆನೆಗಳಿಗೆ ಹೊಡೆದ ಗೂಡ್ಸ್ ರೈಲು 70 km/h ಗಿಂತಲೂ ವೇಗವಾಗಿ ಚಲಿಸುತ್ತಿತ್ತು .ರೈಲ್ವೆ ಇಲಾಖೆ ಅಧಿಕಾರಿಗಳು ಹೇಳುವ ಪ್ರಕಾರ ‘ ನಾವು 2 ದಿನಗಳ ಹಿಂದೆಯೇ ಅರಣ್ಯ ಇಲಾಖೆಗೆ ಅನೆಗಳ ಹಿಂಡು ಆ ಪ್ರದೇಶದಲ್ಲಿ ಸಂಚರಿಸುತ್ತಿರುವುದರ ಬಗ್ಗೆ ಮಾಹಿತಿ ನೀಡಿದ್ದೇವೆ,ಆದರೆ ಅವರು ಕ್ರಮ ಕೈಗೊಳಲ್
Image
-ನೀವು ಹೇಳಿದ್ದು ನಾವು ಕೇಳಿದ್ದು- .ನನ್ನ ಬ್ಲಾಗಿನ ಓದುಗ ಮಹಾಶಯರಿಗೆ ನಮಸ್ಕಾರಗಳು .ನನ್ನ ಇಂದಿನ ಪೋಸ್ಟ್ ONCE AGAIN ನಮ್ಮ ಕಿಂಗ್ ಗೆ ಸಂಬಂಧ ಪಟ್ಟಿದ್ದು .ನಮ್ಮ ಜನಗಳಲ್ಲಿ ಕಿಂಗ್ ನ ಬಗ್ಗೆ ಇರುವ ತಪ್ಪು ಕಲ್ಪನೆಗಳ ಬಗ್ಗೆ ಈ ಪೋಸ್ಟ್ .ಸಾಮಾನ್ಯವಾಗಿ ಕಿಂಗ್ ಮನೆ ಹತ್ತಿರ ಬಂದಿದೆ ಎಂದರೆ ಆ ಮನೆಯವರು ಬಹಳ ಭಯಕ್ಕೊಳಗಾಗುತ್ತಾರೆ  .ಕಿಂಗ್ ಮನೆಗೆ ಬಂದಿದೆ ಎಂದರೆ ಆ ಮನೆಗೆ ಏನೋ ಗ್ರಹಚಾರ ಕಾದಿದೆ ಎಂದು ತಿಳಿಯುತ್ತಾರೆ .ಅವರ ಮನಸ್ಸಿನಲ್ಲಿ ಕಿಂಗ್ ಅಂದರೆ ಬೇರೆ ಹಾವುಗಳಿಗಿಂತ ಭಯ ಜಾಸ್ತಿ .ಅವರ ರೀತಿಯಲ್ಲೇ ಹೇಳುವುದಾದರೆ ‘ ಕಿಂಗ್ ನಮ್ಮನ್ನು ಓಡಿಸಿಕೊಂಡು ಬಂದು ಕಚ್ಚುತ್ತದೆ ’ ಅದು ದೂರದಿಂದಲೇ ವಿಷವನ್ನು ನಮ್ಮ ಮೇಲೆ ಎಸೆಯುತ್ತದೆ,ಅದು ಕಚ್ಚಿದರೆ ಸಾವು ಗ್ಯಾರಂಟಿ..... .ಕೆಲವರು ಇರುತ್ತಾರೆ ಅವರ ಪ್ರಕಾರ ಕಿಂಗ್ ಮನೆ ಹತ್ತಿರ ಬಂದಿದೆ ಎಂದರೆ ಅದು ಯಾರಿಗೋ ಕಚ್ಚಲೆಂದೇ ಬಂದಿದೆ ಎಂದು ಹೇಳಿ ಇದ್ದ ಜನರನೆಲ್ಲಾ ಗಾಭರಿಗೊಳಿಸುತ್ತಾರೆ .ಜನರು ಒಳ್ಳೆಯದನ್ನ ಬೇಗ ನಂಬೋದಿಲ್ಲ,ಆದರೆ ಕೆಟ್ಟದನ್ನ ನಾ ಮುಂದು,ತಾ ಮುಂದು ಎಂದು ನಂಬಿಬಿಡುತ್ತಾರೆ .ಕೆಲವು ಜನರು  ಕಿಂಗ್ ಬಗ್ಗೆ  ಹೇಳುವುದನ್ನು ಕೇಳಿದರೆ ನಗಬೇಕೋ,ಅಳಬೇಕೋ ತಿಳಿಯುವುದಿಲ್ಲ .ಜುಟ್ಟು ಕಾಳಿಂಗ ಅಂತ ಇದೆಯಂತೆ .ಅದು ಜುಟ್ಟಿನಲ್ಲೇ ಮನುಷ್ಯರಿಗೆ  ಹೊಡೆದು ಸಾಯಿಸುತ್ತದೆಯಂತೆ .ಇನ್ನು ಕೆಲವರ ಪ್ರಕಾರ ಸೀಟಿ ಕಾಳಿಂಗ ಅಂತ ಇದೆಯಂತೆ,ನೀವು ಕಾಡಿಗೆ ಹೋಗಿ ಸೀಟಿ ಹೊಡೆದರೆ ನಿಮ್ಮನ್ನು
Image
-ಪ್ರಕೃತಿಯ ಸೊಬಗು MALSHEJ GHAT - .MALSHEJ GHAT -ಪ್ರಕೃತಿ ಸೌಂದರ್ಯದಿಂದ ಕೂಡಿದ ಈ ತಾಣವಿರುವುದು ಪುಣೆಯಿಂದ 120 km ದೂರದಲ್ಲಿ Share this post with your friends
Image
-OPERATION ಕಿಂಗ್  'K '- .ನಮ್ಮ  ಬ್ಲಾಗ್ನಲ್ಲಿ 'ಕಿಂಗ್ ಇನ್ ಮೈ ಹೋಂ' post ಮಾಡಿ 3 ದಿನದ ಒಳಗೇನೆ ಮತ್ತೊಮ್ಮೆ ಕಿಂಗ್ ನಮ್ಮ ಕಣ್ಣಿಗೆ ಬಿದ್ದಿದ್ದಾನೆ  .ಈ ಸರಿ ಕಿಂಗ್ ನಮಗೆ ದರ್ಶನ ಕೊಟ್ಟಿದ್ದು ನಮ್ಮ ಊರ ಸಮೀಪವಿರುವ ಸೂರ್ಳಿ ಎಂಬಲ್ಲಿ  .ಇಲ್ಲಿನ ಸತೀಶ್ ಎಂಬುವರ ಮನೆಯ ಕೊಟ್ಟಿಗೆಯಲ್ಲಿ ಕಿಂಗ್ ಬೇಟೆಯನ್ನರಸುತ್ತ ಬಂದಿದ್ದ  .ಕಿಂಗ್ ಅನ್ನು ನೋಡಿ ಗಾಬರಿಗೊಂಡ ಅವರ ಮನೆಯವರು ಹಾವು ಹಿಡಿಯುವ 'ಜಾನಿ'  ಎಂಬುವರಿಗೆ ಕರೆ ಮಾಡಿ ವಿಷಯ ತಿಳಿಸಿದರು .ನಾವು (ನಾನು,ದಿನೇಶ್) ವಿಷಯ ತಿಳಿದು  ಅವರ ಮನೆಗೆ ಹೋದಾಗ  ಸಮಯ 4.30pm .ನಾವು ಅಲ್ಲಿಗೆ ಹೋದಾಗ ನೋಡಿದ ದೃಶ್ಯ ನಮಗೆ ಒಂದು ಕ್ಷಣ ಗಾಬರಿಯನ್ನು ಉಂಟು ಮಾಡಿತು.ಏಕೆಂದರೆ ಜನರ ಗಲಾಟೆಗೆ ಬೆದರಿ ಕಿಂಗ್ ಅಲ್ಲೇ ಇದ್ದ ಕಟ್ಟಿಗೆಗಳ ಸಂದಿಯಲ್ಲಿ ಅಡಗಿ ಕುಳಿತಿದ್ದ.ಅವನ ತಲೆ ಕಟ್ಟಿಗೆಗಳ ಸಂದಿಯಲ್ಲಿದ್ದರೆ ಇತ್ತ ಕಡೆ ಜಾನಿ ಮತ್ತು ಇನ್ನೊಬ್ಬರು ಅದರ ಬಾಲವನ್ನು ಹಿಡಿದು ಹೊರಗೆ ಎಳೆಯಲು ಪ್ರಯತ್ನಿಸುತ್ತಿದ್ದರು .ತಕ್ಷಣ ದಿನೆಶಣ್ಣ ಅದನ್ನು ಹಾಗೆ ಮಾಡದಿರಲು ಅವರಿಗೆ ಸೂಚಿಸಿದರು,ಏಕೆಂದರೆ ಕಿಂಗ್ ತಲೆ ಕಟ್ಟಿಗೆಗಳ ಒಳಗಿದ್ದ ಕಾರಣ  ಹೊರಗಿನಿಂದ ಬಾಲವನ್ನು ಎಳೆದರೆ ಅದಕ್ಕೆ ಅಪಾಯವಾಗುವ ಸಾಧ್ಯತೆಗಳಿತ್ತು .ಅಷ್ಟರಲ್ಲಿ ಅಲ್ಲಿಗೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಲಿಂಗರಾಜು ರವರು ಪರಿಸ್ಥಿತಿಯನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು  .ನಾವು ಉರಗ ತಜ್ನ್ಯ ಗೌರಿ ಶ
Image
-KING IN MY HOME - ತನ್ನ ಬೇಟೆ ಅರಸಿ ಕಾಡಿನಿಂದ ನಾಡಿಗೆ ( ನಮ್ಮ ಮನೆಗೆ ) ಬಂದ KING- ತನ್ನ ಪ್ರಿಯವಾದ ಬೇಟೆ RAT SNAKE ಅನ್ನು ಹಿಡಿದು ನುಂಗುತ್ತಿರುವ ಕಿಂಗ್ - ಊಟದ ನಂತರ ತೆರಳುತ್ತಿರುವ KING- - ಜನರ ಗಲಾಟೆಯಿಂದ ಕುಪಿತಗೊಂಡ KING- - ಮನಮೋಹಕ ನಮ್ಮ KING- - ಜನಗಳ ಗಲಾಟೆಯಿಂದ ಬೆದರಿ ಕಾಫೀ ಗಿಡ ಹತ್ತಿದ ನಮ್ಮ KING- - ಈ ಜನರ ಸಹವಾಸ ಬೇಡವೆಂದು ಕಾಫೀ ಗಿಡದಿಂದ ಕೆಳೆಗಿಳಿಯುತ್ತಿರುವ KING- - ಕಾಫೀ ಗಿಡದಿಂದ ಕೆಳೆಗಿಳಿದ ನಮ್ಮ KING ತನ್ನ ಮುಂದಿನ ಪಯಣಕ್ಕೆ ಹೊರಟನು ........ ಹೀಗೆ ನಮ್ಮ KING ಅತ್ಯಂತ ರೋಮಾಂಚನವಾದ ತನ್ನ ಬೇಟೆಯ ವಿಧಾನವನ್ನು ನಮಗೆ ನೋಡುವ ಭಾಗ್ಯವನ್ನು ದೊರೆಕಿಸಿದನು - THANK YOU K I N G - Images courtesy-Vinutesh,Dinesh Share this post with your friends

-ಗಂಗಾ-

Image
.ಗಂಗಾ-ಭಾರತದಲ್ಲಿ ಹರಿಯುವ ಅತ್ಯಂತ ದೊಡ್ಡದಾದ ನದಿ .ಗಂಗಾ ನದಿ ಭಾರತದ ಪವಿತ್ರವಾದ ನದಿಗಳಲ್ಲಿ ಪ್ರಮುಖವಾದುದು .ಗಂಗಾ ನದಿಯು ಹಿಮಾಲಯದ ಗಂಗೋತ್ರಿಯಲ್ಲಿ ಹುಟ್ಟಿ 1558 ಮೈಲಿಗಳಷ್ಟು (2507 ಕಿ.ಮಿ) ದೂರವನ್ನು ಕ್ರಮಿಸಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ .ಗಂಗಾ ನದಿಯ ಆಳ -52 feet ನಿಂದ 100 feet .ಗಂಗಾ ನದಿಯು ಭಾರತದ ರಾಷ್ಟ್ರೀಯ ನದಿಯಾಗಿದೆ .ಹೃಷಿಕೇಶ್ ,ಹರಿದ್ವಾರ,ವಾರಣಾಸಿ,ಪ್ರಯಾಗ ಮುಂತಾದ ಪ್ರಮುಖ ಕ್ಷೇತ್ರಗಳು ಈ ಗಂಗಾ ನದಿಯ ತೀರದಲ್ಲಿವೆ .ಗಂಗಾ ನದಿಗೆ ಹಲವಾರು ಉಪನದಿಗಳು ಬಂದು ಸೇರುತ್ತವೆ.ಅವುಗಳಲ್ಲಿ ಪ್ರಮುಖವಾದವು Kosi, Son, Gandaki ಮತ್ತು Ghaghra .ಬಾಂಗ್ಲಾದೇಶವನ್ನು ತಲುಪಿದ ಮೇಲೆ ಅಲ್ಲಿ ಜಮುನ ನದಿಯನ್ನು ಸೇರುವವರೆಗೂ ಗಂಗಾ ನದಿಯ ಪ್ರಮುಖವಾದ ಕವಲನ್ನು ಪದ್ಮ ನದಿ ಯೆಂದು ಕರೆಯುತ್ತಾರೆ .ಸಾಗರಕ್ಕೆ ಗಂಗಾ ನದಿಯ ನೀರಿನ ಬಿಡುಗಡೆ - 12,015 m³/s .ಪ್ರಸಿದ್ದವಾದ ಕುಂಬ ಮೇಳದಂತಹ ಆಚರಣೆಗಳು ಈ ನದಿಯ ತೀರದಲ್ಲಿ ನಡೆಯುತ್ತವೆ .ಗಂಗಾ ನದಿಗೆ ಪ್ರಮುಖವಾಗಿ 2 ಆಣೆಕಟ್ಟುಗಳನ್ನು ಕಟ್ಟಿದ್ದಾರೆ.ಒಂದು ಹರಿದ್ವಾರದ ಬಳಿ,ಮತ್ತೊಂದು Farakka ಎಂಬುವಲ್ಲಿ. .ಗಂಗಾ ನದಿಯ ಒಟ್ಟು ಜಲಾನಯನ ಪ್ರದೇಶ 907,೦೦೦ km² .ಉತ್ತರ ಭಾರತದ ಕೃಷಿಯ ಜೀವಾಳು ಈ ಗಂಗಾ ನದಿ .ಗಂಗಾ ನದಿಯು dolphin ನಂತಹ ಜೀವಿಗಳಿಗೂ ಆವಾಸ ಸ್ಥಾನವಾಗಿದೆ .ಭಾರತದ ಅರ್ದಕ್ಕಿಂತಲೂ ಹೆಚ್ಚು ಜನರ ಜೀವನವನ್ನು ನಿಯಂತ್ರಿಸುವ ಈ ನಮ್ಮ ಗಂಗೆ ಇಂದಿನ ದಿನಗಳಲ್ಲಿ
Image
- COOL FROG - Image courtesy-Rajesh.j.s Share this post with your friends