Posts

Showing posts from November, 2012

ಸೈಕ್ಲೋನ್

Image
.ಇತ್ತೀಚೆಗಷ್ಟೇ ಅಮೇರಿಕಾವನ್ನು ತಲ್ಲಣಗೊಳಿಸಿದ ಸ್ಯಾಂಡಿಯಾಗಿರಬಹುದು.... ಭಾರತದಲ್ಲಿ ಬಾರಿ ಸುದ್ದಿ ಮಾಡಿದ್ದ 'ನೀಲಂ' ಆಗಿರಬಹುದು ಮತ್ತು ಸದ್ಯಕ್ಕೆ ಬಂಗಾಳ ಕೊಲ್ಲಿ ಯಲ್ಲಿ ಸೈಕ್ಲೋನ್ ಆಗಿ ಜನ್ಮ ತಳೆಯಲು ಸಿದ್ದವಾಗಿರುವ Depression ಆಗಿರಬಹುದು .. ಇಂತಹ  ಪ್ರಕೃತಿಯ ವಿನಾಶಕಾರಿ ಸೈಕ್ಲೋನ್  ಗಳ ಬಗ್ಗೆ ಬರೆಯಬೇಕೆಂದೆನಿಸಿ ಈ ಪೋಸ್ಟ್ ಬರೆದಿದ್ದೇನೆ .ವಿನಾಶಕಾರಿ ಸೈಕ್ಲೋನ್  ಗಳು ಹೇಗೆ ಜನ್ಮ ತಾಳುತ್ತವೆ ಎಂಬುದೇ ನಮ್ಮಲ್ಲಿ ಹಲವಾರು ಜನಗಳಿಗೆ ಗೊತ್ತಿಲ್ಲ.ಸೈಕ್ಲೋನ್  ಗಳ ಬಗ್ಗೆ ಮಾತನಾಡುವ ನಮಗೆ ಅದು ಹೇಗೆ ಸೃಷ್ಟಿಯಾಗುತ್ತದೆ ಎಂಬುದೇ ಗೊತ್ತಿರುವುದಿಲ್ಲ.ಈ ಪೋಸ್ಟ್ ನಲ್ಲಿ ನಾನು ಸೈಕ್ಲೋನ್  ಗಳು ಹೇಗೆ ಸೃಷ್ಟಿಯಾಗುತ್ತವೆ ಎಂಬುದರ ಬಗ್ಗೆ ಬರೆದಿದ್ದೇನೆ .ಸಾಮಾನ್ಯವಾಗಿ ಸೈಕ್ಲೋನ್  ಗಳ ಹುಟ್ಟಿನ ಹಿಂದೆ ತುಂಬಾ ವಿಜ್ಞ್ಯಾನ ಅಡಗಿದೆ.ಆದರೆ ನಾನು ಇಲ್ಲಿ ತುಂಬಾ ಸರಳವಾಗಿ ಸೈಕ್ಲೋನ್  ಗಳ ಹುಟ್ಟಿನ ಬಗ್ಗೆ ಬರೆದಿದ್ದೇನೆ .ನಮ್ಮ ದೇಶದಲ್ಲಿ ಸೈಕ್ಲೋನ್  ಗಳ ಅರ್ಭಟ ಕಡಿಮೆ ಎಂದೇ ಹೇಳಬೇಕು.ಆದರೆ ಅಮೇರಿಕಾದಂತಹ ದೇಶಗಳಲ್ಲಿ ಸೈಕ್ಲೋನ್  ಎಂದರೆ ಜನರು ನಡುಗುತ್ತಾರೆ.ಅಷ್ಟರ ಮಟ್ಟಿಗೆ ಅಲ್ಲಿ ಸೈಕ್ಲೋನ್  ಗಳು ಅರ್ಭಟಿಸುತ್ತದೆ .ಸಾಮಾನ್ಯವಾಗಿ ಸೈಕ್ಲೋನ್  ಗಳು ಜನನ ತಾಳುವುದು ಭೂಮದ್ಯ ರೇಖೆಯ ಬಿಸಿ ನೀರಿನ ಸಾಗರಗಳಲ್ಲಿ (Warm Ocean Water- ಬಿಸಿಲಿನಿಂದ ಕಾದ ಸಾಗರಗಳು) .ಸೈಕ್ಲೋನ್ ಗಳು ಜನ್ಮ ತಾಳಲು ಸಾಗರದ ಉಷ್ಣಾಂಶ

ನಡು ರಾತ್ರಿಯ ಹಂತಕ

Image
.ಶೃಂಗೇರಿ ಬಳಿಯ ಒಂದು ಹಳ್ಳಿ ಗೆ ಇತ್ತೀಚಿಗೆ ಒಬ್ಬ ನಡು ರಾತ್ರಿಯ ಹಂತಕ ಭೇಟಿ ನೀಡಿದ್ದ .ಕಾಡಿನಿಂದ ಆಹಾರ ಅರೆಸುತ್ತಾ ಬಂದಿದ್ದ ಈ ಹಂತಕನ ಕಣ್ಣಿಗೆ ಬಿದ್ದಿದ್ದು ಒಂದು ಅಮಾಯಕ ನಾಯಿ .ಈ ನಾಯಿ ಒಂದು ಅತ್ಯುತ್ತಮ್ಮ ಭೇ ಟೆ ನಾಯಿ.ಅದರ ಮನೆಯವರಿಗೆ ಅದರ ಮೇಲೆ ಅತ್ಯಂತ ಪ್ರೀತಿ .ದುರದೃಷ್ಟವಶಾತ್ ಆ ನಾಯಿಯನ್ನು ಅವರು ಅಂದು ರಾತ್ರಿ ಕಟ್ಟಿ ಹಾಕಿ ಮಲಗಿದ್ದರು.ಹಂತಕನ ದಾರಿಯೂ ಅಂದು ಆ ನಾಯಿ ಇದ್ದ ಮನೆಯ ಹತ್ತಿರಕ್ಕೆ ಬಂದಿತ್ತು .ಕಟ್ಟಿ ಹಾಕಿದ್ದರಿಂದ ತಪ್ಪಿಸಿಕೊಳ್ಳಲಾಗದ ಆ ನಾಯಿ ಹಂತಕನ ಆಕ್ರಮಣಕ್ಕೆ ಬಲಿಯಾಯ್ತು .ಇತ್ತೀಚಿನ ದಿನಗಳಲ್ಲಿ ಮಾನವ-ಕಾಡು ಪ್ರಾಣಿಗಳ ಸಂಘರ್ಷ ಹೆಚ್ಚುತ್ತಲೇ ಇದೆ.ಕೆಲವೊಮ್ಮೆ ಈ ಸಂಘರ್ಷದಲ್ಲಿ ಬಲಿಯಾಗುವುದು ಇಂತಹ ಅಮಾಯಕ ಪ್ರಾಣಿಗಳು  .ಆದರೇ ನಾವಿಲ್ಲಿ ನೆನಪಿಡಬೇಕಾದ ಅಂಶವೆಂದರೆ ಇಂತಹ ಕಾಡು ಪ್ರಾಣಿಗಳು ನಾಡಿಗೆ ಬಂದು ಇಲ್ಲಿನ ಪ್ರಾಣಿಗಳ ಮೇಲೆ ಮುಗಿ ಬೀಳಲು ಕಾರಣಕರ್ತರು ಯಾರು??? ನಾವೇ ಅಲ್ಲವೇ.... .ಈ ನಾಯಿಯನ್ನು ಬಲಿ ತೆಗೆದುಕೊಂಡದ್ದು ಚಿರತೆ  ( ಇದನ್ನೇ ಮಲೆನಾಡಿನಲ್ಲಿ  ಕುರ್ಕ ಎಂದು ಕರೆಯುತ್ತಾರೆ) ಚಿರತೆಯನ್ನೇ ಹೋಲುವ ಇವು ಗಾತ್ರದಲ್ಲಿ ಚಿರತೆಗಳಿಗಿಂತ ಗಾತ್ರದಲ್ಲಿ ಚಿಕ್ಕವಿರುತ್ತವೆ (.ವಿಶೇಷ ಸೂಚನೆ- ನಾನಿಲ್ಲಿ ಪೋಸ್ಟ್ ಮಾಡಿರುವ ಚಿತ್ರಗಳು ನಿಮ್ಮ ಮನಸ್ಸಿಗೆ ಘಾಸಿಯನ್ನು ಉಂಟುಮಾಡಬಹುದು. ಚಿಕ್ಕ ಮಕ್ಕಳು ಹಾಗು ಮಹಿಳೆಯರು ಈ ಚಿತ್ರವನ್ನು ನೋಡದಿರುವುದು ಒಳಿತು) .ಹಂತಕನ ಆಕ್ರಮಣಕ್ಕೆ ಬಲಿಯಾದ ನಾ