-ಪಶ್ಚಿಮ ಘಟ್ಟ ಉಳಿಸಿ-





.ಭಾರತದಲ್ಲಿ ಇರುವ 4 hotspot ಗಳಲ್ಲಿ ಪಶ್ಚಿಮ ಘಟ್ಟಗಳು ಕೂಡ ಒಂದು

.
ಒಟ್ಟು ಸುಮಾರು1600 ಕಿ.ಮೀ. ಉದ್ದವಿರುವ ಪಶ್ಚಿಮ ಘಟ್ಟಗಳು ಮಹಾರಾಷ್ಟ್ರ,ಗೋವಾ, ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ಹಬ್ಬಿವೆ



.ಪಶ್ಚಿಮ ಘಟ್ಟಗಳು ಒಟ್ಟು 60000 ಚದರ ಕಿ.ಮೀ. ಪ್ರದೇಶವನ್ನು ಆವರಿಸಿದ್ದು ಅತಿ ಸಂಕೀರ್ಣ ನದಿ ವ್ಯವಸ್ಥೆಗೆ ಮೂಲವಾಗಿವೆ

.
ತಾಮ್ರಪರ್ಣಿ, ಗೋದಾವರಿ, ಕೃಷ್ಣಾ ಶರಾವತಿ ಮತ್ತು ನೇತ್ರಾವತಿ ಮುಂತಾದ ನದಿಗಳ ಉಗಮ ಸ್ಥಾನವು ಪಶ್ಚಿಮ ಘಟ್ಟ

.
ಕೆಮ್ಮಣ್ಣುಗುಂಡಿ, ಕೊಡಚಾದ್ರಿ, ಕುದ್ರೆಮುಖ .ಮಹಾಬಲೇಶ್ವರ, ಸೋನ್ಸಾಗರ್, ಮುಳ್ಳಯ್ಯನಗಿರಿ,ಆನೈ ಮುಡಿ ಮುಂತಾದ ಪ್ರಮುಖ ಶಿಖರಗಳನ್ನು ಪಶ್ಚಿಮ ಘಟ್ಟಗಳು ಒಳಗೊಂಡಿವೆ

.
ಘಟ್ಟ ಪ್ರದೇಶಗಳಲ್ಲಿ ಸರಾಸರಿ ತಾಪಮಾನ ಉತ್ತರದಲ್ಲಿ ೨೪ ಡಿ. ಸೆಲ್ಸಿಯಸ್ ಮತ್ತು ದಕ್ಷಿಣದಲ್ಲಿ ೨೮ ಡಿ. ಸೆಲ್ಸಿಯಸ್



.
ಪ್ರದೇಶದಲ್ಲಿ 13 ರಾಷ್ಟ್ರೀಯ ಉದ್ಯಾನಗಳು,2 biosphere reserves ಗಳಂತಹ ಸಂರಕ್ಷಿತ ಪ್ರದೇಶಗಳಿವೆ

.
ಪಶ್ಚಿಮ ಘಟ್ಟಗಳು ಸಾವಿರಾರು ತಳಿಯ ಪ್ರಾಣಿಗಳಿಗೆ ನೆಲೆಯಾಗಿದ್ದು ಜಾಗತಿಕವಾಗಿ ವಿನಾಶದಂಚಿನಲ್ಲಿರುವ 325 ತಳಿಗಳ ಪ್ರಾಣಿಗಳನ್ನು ಒಳಗೊಂಡಿದೆ

.
ಒಟ್ಟು 139 ತಳಿಯ ಸಸ್ತನಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ

.
ಕರ್ನಾಟಕದ ಘಟ್ಟಗಳು 6000 ಆನೆಗಳಿಗೆ ಆವಾಸಸ್ಥಾನವಾಗಿವೆ

.
508 ಪ್ರಭೇದದ ಪಕ್ಷಿಗಳು ಮತ್ತು 179 ಪ್ರಕಾರದ ದ್ವಿಚರಿಗಳಿಗೆ ಪಶ್ಚಿಮ ಘಟ್ಟಗಳು ನೆಲೆಯಾಗಿವೆ

.
ವಿಶ್ವದಲ್ಲಿ ಅಳಿವಿನಂಚಿನಲ್ಲಿರುವ ಜೀವತಳಿಗಳ ಪೈಕಿ 325 ತಳಿಗಳ ಜೀವಿಗಳು ಪಶ್ಚಿಮ ಘಟ್ಟಗಳಲ್ಲಿ ನೆಲೆಸಿವೆ

.
ದೇಶದ ಹವಾಮಾನವನ್ನು ಸುಸ್ತಿತಿಯಲ್ಲಿಡಲು ಪಶ್ಚಿಮ ಘಟ್ಟ ಗಳು ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತವೆ



.ಜೂನ್ ತಿಂಗಳಿನಿಂದ ಸೆಪ್ಟೆಂಬರ್ವರೆಗಿನ ಮಳೆಗಾಲದಲ್ಲಿ ಇಲ್ಲಿ ಬೀಳುವ ಸರಾಸರಿ ಮಳೆ ವಾರ್ಷಿಕ 3000 ದಿಂದ 4000 ಮಿಲಿಮೀಟರ್

.
ಎತ್ತರದ ಪ್ರದೇಶಗಳಲ್ಲಿ ಸದಾಹಸಿರಿನ ಮಳೆಕಾಡುಗಳಿದ್ದು ಅತೀವ ಸಸ್ಯ ವೈವಿಧ್ಯವನ್ನು ಹೊಂದಿವೆ

.
ಜಗತ್ತಿನ ಬೇರೆ ಯಾವ ಭಾಗದಲ್ಲಿಯೂ ಕಾಣದ 84 ಜಾತಿಯ ದ್ವಿಚರಿಗಳು, 16 ಪ್ರಕಾರದ ಪಕ್ಷಿಗಳು, 7 ತಳಿಯ ಸಸ್ತನಿಗಳು ಮತ್ತು 1600 ಹೂಬಿಡುವ ಸಸ್ಯಗಳು ಪಶ್ಚಿಮ ಘಟ್ಟಗಳಲ್ಲಿ ಇವೆ

.
ಇದು ಪಶ್ಚಿಮ ಘಟ್ಟಗಳ ಬಗ್ಗೆ ಕೇವಲ 1 ಸಣ್ಣ ಪರಿಚಯವಷ್ಟೇ,ಇಂತಹ ಸಾವಿರಾರು ಪ್ರಕೃತಿ ಅದ್ಭುತಗಳಿಂದ ಕೂಡಿದೆ ನಮ್ಮ ಪಶ್ಚಿಮ ಘಟ್ಟಗಳು

.
ಆದರೆ ಇಂತಹ ಬೆಲೆ ಕಟ್ಟಲಾಗದ ಪಶ್ಚಿಮ ಘಟ್ಟಗಳು ಇಂದು ನಮ್ಮ ಹಾಗು ನಮ್ಮನ್ನಾಳುವ ಸರ್ಕಾರಗಳಿಂದ ವಿನಾಶದ ಅಂಚಿಗೆ ತಲುಪಿವೆ




.ಸರ್ಕಾರಗಳ ಉದ್ದೇಶಗಳು ಒಳ್ಳೆಯದಾದರೂ ಅದನ್ನು ಜಾರಿಗೊಳಿಸಲು ಬಳಸುತ್ತಿರುವ ಮಾರ್ಗಗಳು ಪ್ರಕೃತಿಗೆ ಮಾರಕವಾಗಿದೆ

.
2010 ರಲ್ಲಿ ಭಾರತದಲ್ಲಿ ಆಗುತ್ತಿರುವ ಹವಾಮಾನ ವ್ಯಪರೀತ್ಯಗಳನ್ನು ಗಮನಿಸಿದರೆ ನಮಗೆ ಇದರ ಅರಿವಾಗುತ್ತದೆ

.
ಇಂದಿನ ದಿನಗಳಲ್ಲಿ ಪಶ್ಚಿಮ ಘಟ್ಟಗಳ ಮಾರಣ ಹೋಮ ಎಗ್ಗಿಲ್ಲದೆ ಸಾಗಿದೆ

.
ಒಂದು ಕ್ಷಣ ಯೋಚಿಸಿ ನೋಡಿ,ನಾವು ನಮ್ಮ ದಿನನಿತ್ಯದ ಜೀವನದಲ್ಲಿ ವಿಷಯಗಳ ಬಗ್ಗೆ ಎಷ್ಟು ಸಮಯ ಯೋಚನೆ ಮಾಡುತ್ತೇವೆಂದು....

.ನಮ್ಮ ಕುತ್ತಿಗೆಗೆ ಬರುವವರೆಗೂ ಯಾವ ವಿಚಾರಗಳು ನಮಗೆ ಬೇಕಾಗುವುದಿಲ್ಲ

.
ನಿಮನ್ನು ಸಾಕಿ ಬೆಳೆಸಿದ ನಿಮ್ಮ ತಂದೆ ತಾಯಿಯರಿಗೆ ಯಾರಾದರು ನೋವು ಉಂಟು ಮಾಡಿದರೆ ನಿಮಗೆ ಕೋಪ ಬರುತ್ತದೆ.ಆದರೆ ನೀವು ಹುಟ್ಟಿದ ಕ್ಷಣದಿಂದ ನೀವು ಸಾಯುವವರೆಗೂ ನಿಮಗೆ ಬದುಕಲು ಸಹಾಯ ಮಾಡುವ ಮಹಾತಾಯಿ ಪ್ರಕೃತಿ ನಾಶವಾಗುತ್ತಿರುವಾಗ ನಿಮಗೆ ಏನು ಅನ್ನಿಸುವುದಿಲ್ಲವೇ?

.
ಏಳಿ,ಎದ್ದೇಳಿ ಎಂಬ ವಿವೇಕಾನಂದರ ವಾಕ್ಯವನ್ನು ಇಂದು ಪ್ರಕೃತಿಯನ್ನು ಉಳಿಸಲು ಬಳಸಬೇಕಾಗಿದೆ

.
ಪಶ್ಚಿಮ ಘಟ್ಟಗಳ ನಾಶ ಪ್ರಕೃತಿಯ ನಾಶವಲ್ಲ, ಅದು ನಮ್ಮೆಲ್ಲರ ನಾಶ.....

.
ಇನ್ನಾದರೂ ಪ್ರಕೃತಿಯ ಉಳಿವಿಗೆ ನಿಮ್ಮ ಕ್ಯೆಲಾದ ಸಹಾಯ ಮಾಡಿ.......ಪಶ್ಚಿಮ ಘಟ್ಟಗಳನ್ನು ಉಳಿಸಿ

"
ಉಳಿಸದಿದ್ದರೆ ಪಶ್ಚಿಮ ಘಟ್ಟ,ನೀವು ಸತ್ತಮೇಲೆ ನಿಮಗಾಗಿ ಮಾಡಲು ಇರುವುದಿಲ್ಲ 1 ಚಟ್ಟ"






.........ಪಶ್ಚಿಮ ಘಟ್ಟಗಳನ್ನು ಉಳಿಸಿ..........

image courtesy-DINESH,RAGHU



Bookmark and Share

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....