-ಬೆಂಕಿಯುಗುಳುತ್ತಿರುವ Mount Merapi-
.Mount Merapi ಈ ಹೆಸರನ್ನು ನೀವು ಈಗಾಗಲೇ ಕೇಳಿರಬಹುದು

.ಕಳೆದ 10,12 ದಿನಗಳಿಂದ ಈ Mount Merapi ಘರ್ಜಿಸುತ್ತಿದೆ.ಇದರ ಘರ್ಜನೆಗೆ ಈಗಾಗಲೇ 156 ಜೀವಗಳು ಬಲಿಯಾಗಿವೆ

 .'Mount Merapi' -Indonesia ದ ಜ್ವಾಲಾಮುಖಿ ಪರ್ವತ

.Indonesia ದಲ್ಲೇ ಅತ್ಯಂತ active ಜ್ವಾಲಾಮುಖಿ ಈ 'Mount Merapi'

.1548 ರಿಂದಲೇ ಇದು ಆಗಾಗ ಲಾವ ಉಗುಳುತ್ತಲೇ ಇದೆ

.Yogyakarta ನಗರ ದಿಂದ 28 km ದೂರದಲ್ಲಿರುವ ಇದರ ತಪ್ಪಲಿನಲ್ಲಿ ಸಾವಿರಾರು ಜನರು ವಾಸ ಮಾಡುತ್ತಿದ್ದಾರೆ

.ವರ್ಷದಲ್ಲಿ 300 ದಿನಗಳಲ್ಲೂ ಇದರ ಬಾಯಿಯಿಂದ ಹೋಗೆ ಏಳುತ್ತಿರುವುದನ್ನು ನೋಡಬಹುದು

.November 22 ,1994 ರಲ್ಲಿ ಇದರ ಸ್ಪೋಟದಿಂದಾಗಿ 27 ಜನರು ಸಾವನಪ್ಪಿದ್ದರು

.2006 ರಲ್ಲು ಇದು ಸ್ಪೋಟಿಸಿತ್ತು

.ಇತ್ತೀಚಿಗೆ ಅಂದರೆ 25 October 2010 ರಂದು indonesia ಸರ್ಕಾರ 'Mount Merapi' ಯ ಜ್ವಾಲಾಮುಖಿ ಸ್ಪೋಟಿಸುವ ಬಗ್ಗೆ ಅದರ ಸುತ್ತ ಮುತ್ತಲ ಜನರಿಗೆ ಎಚ್ಚರಿಕೆಯನ್ನು ನೀಡಿತ್ತು

.ಇದರ ಸುತ್ತಮುತ್ತಲಿನ 20 km ವ್ಯಾಪ್ತಿಯಲ್ಲಿ ಇರುವ ಜನರಿಗೆ ತಕ್ಷಣ ಅಲ್ಲಿಂದ ಜಾಗ ಖಾಲಿಮಾಡಲು ಅಲ್ಲಿನ ಸರ್ಕಾರ ಆದೇಶಿಸಿತ್ತು

.ಅಧಿಕಾರಿಗಳು ಹೇಳುವಂತೆ October 23 ,24 ರಂದು ಇಲ್ಲಿ ಜ್ವಾಲಾಮುಖಿಗೆ ಸಂಭಂದಿಸಿದ 500 ಭೂಕಂಪನಗಳು ಸಂಭವಿಸಿವೆ

.25 October 2010 ರ ಮಧ್ಯಾನ್ಹದಿಂದ Mount Merapi ಲಾವ ಹೊರಹಾಕಲಾರಂಭಿಸಿತು

.ಅಂದಿನಿಂದ ಇಲ್ಲಿಯವರೆಗೂ Mount Merapi ಘರ್ಜಿಸುತ್ತಲೇ ಇದೆ

.ಇದರ ಪ್ರಭಾವ ಎಷ್ಟಿತ್ತೆಂದರೆ ಭಾರತದ ಕೆಲವು ನಗರಗಳಲ್ಲೂ ಕೂಡ ಜ್ವಾಲಾಮುಖಿಯ ಬೂದಿ ಪತ್ತೆಯಾಗಿದೆ

.ಸುಮಾರು 2 ,50 ,೦೦೦ ಜನರು ತಮ್ಮ ಮನೆಗಳನ್ನು ಬಿಟ್ಟು ತಾತ್ಕಾಲಿಕ ವಸತಿ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ

.ಕುಡಿಯಲು ನೀರಿನ ಸಮಸ್ಯೆ,ಮುಖ್ಯವಾಗಿ ಹೊಗೆಯಿಂದಾಗಿ ಶ್ವಾಸಕೋಶ ಸಂಭಂದಿತ ಖಾಯಿಲೆಗಳಿಂದ ಜನ ಬಳಲುತ್ತಿದ್ದಾರೆ

.ಇಲ್ಲಿ ಇನ್ನೊಂದು ಗಮನಿಸಬೇಕಾದ ಅಂಶವೆಂದರೆ ಈ Mount Merapi ಘರ್ಜಿಸುವ ಮೊದಲು Indonesia ದಲ್ಲಿ 7.7-magnitude ಭೂಕಂಪ ಸಂಭವಿಸಿ ಅದರಿಂದ ಉಂಟಾದ ಸುನಾಮಿಯಿಂದ 449 ಜೀವಗಳು ಬಲಿಯಾಗಿದ್ದವು

.ಒಟ್ಟಿನಲ್ಲಿ Mount Merapi ಎಂಬ 'ಬೆಂಕಿಯ ಗಿರಿ' ಗೆ Indonesia ಜನರ ಬದುಕು ಮೂರಾಬಟ್ಟೆಯಾಗಿದೆ

.ಕೆಲವು ವಿಜ್ಞಾನಿಗಳ ಪ್ರಕಾರ Indonesia ದಲ್ಲಿ ಸಂಭವಿಸಿದ ಭೂಕಂಪ ಹಾಗು ಜ್ವಾಲಾಮುಖಿ ಮುಂದೆ ಸಂಭವಿಸಬಹುದಾದ 'ಪ್ರಕೃತಿ ವ್ಯಪರಿತ್ಯ' ದ ಸುಳಿವುಗಳು

.2010 ರಲ್ಲಿ ಪ್ರಕೃತಿ ತನ್ನ ಕೋಪವನ್ನು ಜಗತ್ತಿನೆಲ್ಲೆಡೆ ಪ್ರದರ್ಶಿಸುತ್ತಲೇ ಇದೆ

.ದೂರದ indonesia ದಿಂದ ಹಿಡಿದು ನಮ್ಮ ರಾಜ್ಯದಲ್ಲೂ ಪ್ರಕೃತಿ ಮುನಿಸು ಮುಂದುವರಿದಿದೆ.ನಮ್ಮ ರಾಜ್ಯದಲ್ಲಿ 'ಜಲ್ ಚಂಡಮಾರುತ'ದ ಪ್ರಭಾವದಿಂದ ಈಗಾಗಲೇ ಸಾವಿರಾರು ಮನೆಗಳು ಹಾನಿಗೊಳಗಾಗಿದ್ದು,ವ್ಯವಸಾಯಕ್ಕೆ ಹಾಗು ಅದನ್ನೇ ನಂಬಿ ಬದುಕು ಸಾಗಿಸುತ್ತಿರುವ ಜನರನ್ನು ಬೀದಿಗೆ ತಂದ್ದು ನಿಲ್ಲಿಸಿದೆ

.ಇನ್ನಾದರೂ ಮಾನವ ಎಚ್ಚೆತ್ತುಕೊಳ್ಳುತ್ತಾನಾ? ಪ್ರಕೃತಿಯನ್ನೇ ಎದುರು ಹಾಕಿಕೊಂಡು ಮೆರೆಯುವ ಮನುಷ್ಯನಿಗೆ ಆ ಪ್ರಕೃತಿಯ ಉತ್ತರವೇ ಈ 'ಭೂಕಂಪ' ,'ಜ್ವಾಲಾಮುಖಿ',ಚಂಡಮಾರುತ'..................

.'ಬೆಂಕಿ ಗಿರಿಗೆ' ವೀಡಿಯೊ ಲಿಂಕ್-ಇಲ್ಲಿ ಕ್ಲಿಕ್ ಮಾಡಿ


Bookmark and Share

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....