Posts

Showing posts from 2013

ರಾಜ ಕಾಳಿಂಗ

Image
ಮಿತ್ರ ರಾಘು .. ಬ್ಲಾಗ್ ನಲ್ಲಿ ಬರೆಯಲು ಅವಕಾಶ ನೀಡಿದ್ದಕ್ಕಾಗಿ ಧನ್ಯವಾದ..  ನಾನು ದಿನೇಶ್ ಜಮ್ಮಟಿಗೆ.. ಕಾಡು ಗುಡ್ಡ  ಸುತ್ತೋದು.. ಹುಳು ಹಪ್ಪಟ್ಟೆ ಚಿತ್ರ ತೆಗೆಯೋದು ನನ್ನ ಇಷ್ಟ... ಮೊನ್ನೆ ನಮ್ಮ ಊರಿನ ಫಾರೆಸ್ಟರ್ ಕರೆ ಮಾಡಿ ತುರ್ತಾಗಿ ಬರಲು ಹೇಳಿದ್ರು .  ಹೋಗಿ ನೋಡಿದಾಗ ಕಾಳಿಂಗ ಊರಿನ ಕುಡಿಯುವ ನೀರಿನ ಪಂಪ್ ಹೌಸ್ ಕೆಳಗಿನ ಬಾವಿಯೊಳಗೆ ಬಿದ್ದಿತ್ತು . ಮುಂದಿನದ್ದು ಅವನನ್ನು ಸುರಕ್ಷಿತವಾಗಿ ರಕ್ಷಿಸುವ ಕಾರ್ಯಾಚರಣೆ . ಆಗುಂಬೆಯಿಂದ ಹಾವು ರಕ್ಷಕ ಅಜಯ್ ಗಿರಿಯ ಆಗಮನ . ಕತ್ತಲೆಯ ಬಾವಿಯೊಳಗೆ ಕಾರ್ಯಾಚರಣೆ . ಆಳದ ಬಾವಿಯಲ್ಲಿನ ರಾಜ ಕಾಳಿಂಗನನ್ನು ಕೈ ಮತ್ತು ಸ್ಟಿಕ್  ಬಳಸಿ , ಹಗ್ಗದೊಂದಿಗೆ ಇಳಿಸಲಾದ ಮರದ ಮೇಲೆ ಸಾಹಸದಿಂದ ಕೂರಿಸಲಾಯಿತು . ಗಾಬರಿ ಮತ್ತು ಥ೦ಡಿಯಾದ ರಾಜ ಕುತೂಹಲದಿಂದ ಮರದ ರೆಂಬೆಯ ಮೇಲೆ ಆಸೀನನಾಗಿದ್ದ . ಬಾವಿಯ ಮೇಲ್ಬಾಗಕ್ಕೆ ಬಂದಾಗ ಅಜಯ್ ರವರ ಸಹಾಯ ಹಸ್ತದೊಂದಿಗೆ ಹೊರ ಲೋಕಕ್ಕೆ ಆಗಮನ . ಜೊತೆಗೆ ಸುತ್ತ ಕುತೂಹಲದಿಂದ ನೆರೆದ ಜನಕ್ಕೆ ಕಾಳಿಂಗ ರಾಜನ ಸ್ವಭಾವ ಮತ್ತು ವಾಸ್ತವ್ಯದ ಪ್ರದೇಶದ ಮಾಹಿತಿಯೊಂದಿಗೆ , ರಕ್ಷಣೆಯ ಬಗ್ಗೆ ಮಾಹಿತಿ . ಹಿಡಿದ ಸ್ಥಳದಿಂದ ಸ್ವಲ್ಪವೇ ದೂರದಲ್ಲಿ ಕಾಳಿಂಗನಿಗೆ ಸ್ವಾತಂತ್ರ್ಯ . ಸ್ವತಂತ್ರನಾದ ಕೂಡಲೇ ಸ್ವಚಂಧವಾಗಿ ತುಂಗಾ ನದಿಯಲ್ಲಿ ವಿಹಾರ . ನನಗೆ ಕೆಲವು ಚಿತ್ರಗಳೊಂದಿಗೆ , ಊರಿಗೆ ಬಂದ ರಾಜನನ್ನು ಮರಳಿ ಅವನ ಸಾಮ್ರಾಜ್ಯಕ್ಕೆ ಕಳುಹಿಸಿದ ಸಂತೃಪ್ತಿ . ಜೀವದ ಹಂಗು ತೊರೆದು

ಬಂಡೀಪುರದ ನರಭಕ್ಷಕ..!!!

Image
.ಪ್ರಿಯ ಪ್ರಕೃತಿ ಪ್ರಿಯ ಮಿತ್ರರೇ ಮೊದಲನೆಯದಾಗಿ ಹಲವು ತಿಂಗಳುಗಳಿಂದ ಬ್ಲಾಗ್ ಪೋಸ್ಟ್ ಬರೆಯದೆ ಇರುವುದಕ್ಕಾಗಿ ಕ್ಷಮೆ ಇರಲಿ (ಚಿತ್ರ ಕೃಪೆ-ವಿಜಯವಾಣಿ) (ಈ ಹುಲಿಗೆ ಸಂಭಂದಪಟ್ಟ updates ಗಳನ್ನು ಪೋಸ್ಟ್ ನ ಕೊನೆಯಲ್ಲಿ ಮಾಡಲಾಗಿದೆ ) ಬಂಡೀಪುರದ ನರಭಕ್ಷಕ...!! ಕಳೆದ ಒಂದು ವಾರದಿಂದ ದಿನಪತ್ರಿಕೆಗಳಲ್ಲಿ ನೀವು ಈ ವಿಷಯವನ್ನು ಗಮನಿಸಿರಬಹುದು. ನವೆಂಬರ್ 27 ರ ಬುಧವಾರದಂದು ಬಂಡೀಪುರ ರಾಷ್ಟ್ರೀಯ ಉದ್ಯಾನದ ಹೊರ ಪ್ರದೇಶದಲ್ಲಿ ಬಸವರಾಜು ಎಂಬುವವರ ಮೇಲೆ ದಾಳಿ ನಡೆಸಿ ಅವರ ಸಾವಿಗೆ ಕಾರಣವಾದ ಹುಲಿಯೊಂದರ ಬಗ್ಗೆ ಸುದ್ದಿಯನ್ನು ನೀವು ಕೇಳಿರಬಹುದು  .ಇದಾದ ಕೇವಲ 2 ದಿನಗಳ ನಂತರ ಉದ್ಯಾನವನದ 100 ಮೀಟರ್ ಹೊರ ಪ್ರದೇಶದಲ್ಲಿ ಜೇನು ಕುರುಬ ಜನಾಂಗದ ಚೆಲುವ ಎಂಬುವವರ ಮೇಲೆ ಹುಲಿಯೊಂದು ದಾಳಿ ನಡೆಸಿ ಕೊಂದು ಹಾಕಿದೆ .ಈ ಮೇಲಿನ ಎರಡೂ ಘಟನೆಗಳಲ್ಲೂ ಕೂಡ ಹುಲಿ ಕೊಂದ ದೇಹವನ್ನು ತಿನ್ನದೇ ಬಿಟ್ಟು ಹೋಗಿದೆ.ಮೊದಲೇ ಘಟನೆಯಲ್ಲಿ ಹುಲಿ ಬಸವರಾಜುರವರ ತಲೆಗೆ ಗಾಯ ಮಾಡಿದ್ದು ದೇಹದ ಯಾವುದೇ ಭಾಗವನ್ನು ತಿನ್ನದೇ ಬಿಟ್ಟು ಹೋಗಿದೆ.ಎರಡನೇ ಘಟನೆಯಲ್ಲಿ ಹುಲಿ ಚೆಲುವರ ಮೇಲೆ ದಾಳಿ ನಡೆಸಿದಾಗ ಅವರ ಜೊತೆಯಲ್ಲಿ ಇದ್ದ ಅವರ ಸ್ನೇಹಿತ ಚಿಕ್ಕ ತಮ್ಮ ಬಳಿ ಇದ್ದ ಕತ್ತಿಯೊಂದಿಗೆ ಹುಲಿಯನ್ನು ಹಿಂಬಾಲಿಸಿದ್ದಾರೆ  .ಆಗ ಹುಲಿ ಚೆಲುವವ ದೇಹವನ್ನು ಬಿಟ್ಟು ಇವರ ಮೇಲೆ ದಾಳಿಗೆ ಮುಂದಾಗಿದ್ದು ಅವರು ಅದರಿಂದ ತಪ್ಪಿಸಿಕೊಂಡಿದ್ದಾರೆ. ಈ ಘಟನೆಯಲ್ಲೂ
Image
-YELLOW STONE ನ್ಯಾಷನಲ್ ಪಾರ್ಕ್- . YELLOW STONE ನ್ಯಾಷನಲ್ ಪಾರ್ಕ್ -ಇದು ಪ್ರಪಂಚದ ಪ್ರಥಮ ನ್ಯಾಷನಲ್ ಪಾರ್ಕ್ .ಇರುವ ಸ್ಥಳ-ಅಮೆರಿಕಾದ Wyoming ಎಂಭಲ್ಲಿ .ಪರಿಸರ ಪ್ರೇಮಿಗಳಿಗಂತೂ ಈ ಪಾರ್ಕ್ ಸ್ವರ್ಗ .ಇಲ್ಲಿನ ಒಟ್ಟು ವಿಸ್ತೀರ್ಣ- 3,468 square miles . lakes, canyons, rivers and mountain ranges ಎಲ್ಲವನ್ನು ಈ ನ್ಯಾಷನಲ್ ಪಾರ್ಕ್ ಒಳಗೊಂಡಿದೆ .ಇಲ್ಲಿನ ಪ್ರಸಿದ್ದವಾದ LAKE - Yellowstone Lake .ಪ್ರಪಂಚಕ್ಕೆ ಮಾರಕವಾಗಬಲ್ಲ supervolcano ಗಳು ಇಲ್ಲಿವೆ .ಪ್ರಪಂಚದ ಅರ್ದದಷ್ಟು geothermal features ಗಳ ತಾಣ ಈ ನ್ಯಾಷನಲ್ ಪಾರ್ಕ್ .ನೂರಾರು ಪ್ರಭೇದದ ಸಸ್ತನಿಗಳು,ಪಕ್ಷಿಗಳು,fish and reptiles ಗಳ ಆವಾಸ ಸ್ಥಾನ ಈ ಪಾರ್ಕ್ .ವಿನಾಶದಂಚಿನಲ್ಲಿರುವ ಹಲವಾರು ಜೀವಿಗಳು ಇಲ್ಲಿ ಕಂಡುಬರುತ್ತವೆ .ಪ್ರಾಣಿಗಳೇ ಅಲ್ಲದೆ ಸಾವಿರಾರು ಬಗೆಯ ಗಿಡ ಮರಗಳು ಇಲ್ಲಿವೆ .ಇಲ್ಲಿನ ಎತ್ತರದ ಪಾಯಿಂಟ್ 11,358 ft / 3,462 m (Eagle Peak) .ವಾರ್ಷಿಕ ಮಳೆಯ ಪ್ರಮಾಣ 26 cm ನಿಂದ 205 cm .ಈ ಪಾರ್ಕ್ 5 % ಜಾಗ ನೀರಿನಿಂದ , 15% ಹುಲ್ಲುಗಾವಲಿನಿಂದ , 80% ಕಾಡಿನಿಂದ ಆವೃತವಾಗಿದೆ .ಇಲ್ಲಿ ದಾಖಲಾದ ಅತಿ ಅತಿ ಹೆಚ್ಚು ಉಷ್ಣಾಂಶ 37 C ,ಅತೀ ಕಡಿಮೆ -54 C . 1,700 species of native vascular plants , More than 170 species of exotic (non-native) plants, 186 species
Image
-ಹಸಿರು ಹಾದಿಯಲ್ಲಿ ಹುಚ್ಚು ಪ್ರಯಾಣ- .ಪ್ರಿಯ ಓದುಗ ಮಿತ್ರರೇ ಇದೇ ಪ್ರಥಮ ಬಾರಿಗೆ ನಾನು ಇಲ್ಲಿ ನನ್ನ ಪ್ರಾವಾಸದ ಅನುಭವ ಒಂದನ್ನು ವಿವರವಾಗಿ ಪೋಸ್ಟ್ ಮಾಡಿದ್ದೇನೆ .ಇದು ಬಹಳ ಧೀರ್ಘವಾದ ಪೋಸ್ಟ್ ,ಪುರ್ಸೊತ್ ಮಾಡ್ಕೊಂಡು ಓದಿ .ಈ ಪೋಸ್ಟ್ ನ TITLE ಸ್ವಲ್ಪ ವಿಚಿತ್ರ ಅಂತ ನಿಮಗನಿಸಬಹುದು.ನಮ್ಮ ಪ್ರವಾಸದ ಕತೆ ಕೇಳಿದ ಜನಗಳು ನಿಮಗೆ ಹುಚ್ಚು ಅಂತ ಹೇಳಿದ್ದರು so ನಾನು ಈ ಪೋಸ್ಟ್ title ಅನ್ನು ಹಸಿರು ಹಾದಿಯಲ್ಲಿ ಹುಚ್ಚು ಪ್ರಯಾಣ ಎಂದು ಬರೆದದ್ದು .ನಾನು ಇಲ್ಲಿಯವರೆಗೆ ಪ್ರಕೃತಿಯ ಹಲವಾರು ಜಾಗಗಳಲ್ಲಿ ಸ್ನೇಹಿತರ ಜೊತೆ ಅಲೆದಾಡಿದ್ದೇನೆ.ಪ್ರತಿಯೊಂದು ಅಲೆದಾಟದಲ್ಲೂ ಒಂದು ಹೊಸ ಅನುಭವ.ಹಾಗಾಗಿಯೇ ಕಾಡು ಮೇಡು ಅಲೆಯುವುದೆಂದರೆ ನನಗೆ ಎಲ್ಲಿಲ್ಲದ ಪ್ರೀತಿ .ಹೀಗೆ ಪ್ರಕೃತಿಯ ಸೌಂದರ್ಯ ಸವಿಯಲು ಹೋದ ಒಂದು ಪ್ರವಾಸದ ಅನುಭವ ನನ್ನ ಜೀವನದಲ್ಲಿ ಮರೆಯಲಾಗುವುದಿಲ್ಲ.ಅದನ್ನು ಇಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ.ಅದೂ ಪ್ರವಾಸ ಹೋದ ಬರೋಬ್ಬರಿ 1 ವರ್ಷದ ನಂತರ .ಅದು 2009 ನವೆಂಬರ್ ನಾನಾಗ ಸಿಲಿಕಾನ್ ಸಿಟಿ ಯಲ್ಲಿದ್ದೆ.ಆ ನಗರದ ಜಂಜಾಟ ನೋಡಿ ನೋಡಿ ಮನಸ್ಸು ಬೇಸತ್ತಿತ್ತು.ಮನಸ್ಸು ಪ್ರಕೃತಿಯನ್ನು ಹಂಬಲಿಸುತ್ತಿತ್ತು .ಅದೇ ಸಮಯಕ್ಕೆ ಸರಿಯಾಗಿ ನನ್ನ ಆತ್ಮೀಯ ಸ್ನೇಹಿತ ರಾಜೇಶ್ ಕೂಡ ಎಲ್ಲಾದರು ಪ್ರವಾಸ ಹೋಗುವ ಬಗ್ಗೆ ವಿಷಯ ಎತ್ತಿದನು .ಸರಿ ನನಗೂ ಬೇಕಾಗಿದ್ದು ಅದೇ.ಅವನು ಹಾಗೆ ಹೇಳಿದ ತಕ್ಷಣ ಅಂತರ್ಜಾಲದಲ್ಲಿ ಪ್ರಕೃತಿಯ ತಾಣಕ್ಕೆ ಹುಡುಕಾಟ ಆರಂ