Posts

Showing posts from 2015

ಹುಲಿ ಬಂತು ಹುಲಿ

Image
. 'ಏನ್ರೀ ನಿಮ್ಮೂರಲ್ಲಿ ಹುಲಿ ಕಾಟ ಅಂತೆ.... ಯಾರು ತಂದು ಬಿಟ್ಟಿದ್ದು ಮಾರಾಯ್ರೆ ಈ ಹುಲಿಗಳನ್ನ...ಇದೊಂದು ಕಾಟ ಇರ್ಲಿಲ್ಲ ಈಗ ಇದೂ ಶುರುವಾಗಿದೆ'  ಹರಿಹರಪುರದ ಪೇಟೆಯಲ್ಲಿ ಮಿತ್ರ ದಿನೇಶ್ ರವರ ಅಂಗಡಿಯಲ್ಲಿ ಕುಳಿತು ಚಹಾ ಹೀರುತ್ತಿರುವಾಗ ಧಿಡೀರನೆ ಬಿದ್ದ ಈ ಪದಗಳು ಒಮ್ಮೆ ನಮ್ಮಲ್ಲಿ ಮಿಂಚಿನ ಸಂಚಲನವನ್ನುಂಟು ಮಾಡಿದವು . ಹಾಗೆ ನೋಡಿದರೆ ಮಲೆನಾಡಿನ ಜನರಿಗೆ ಹಿಂದಿನಿಂದಲೂ ಬದುಕಿನ ಒಂದು ಭಾಗವೇ ಆಗಿರುವ 'ಕುರ್ಕ' ದ ಬಗ್ಗೆ ಜನರು ಮಾತನಾಡಿಕೊಳ್ಳುವುದು ಸಾಧಾರಣವಾಗಿ ನಾವು ಕೇಳಿರುತ್ತೇವೆ  (ಚಿರತೆಗೆ ಇಲ್ಲಿನ ಜನರು 'ಕುರ್ಕ' ಎಂದು ಕರೆಯುವುದು..ಆದರೆ ಕುರ್ಕ ಹಾಗು ಚಿರತೆ ಒಂದೇ ಎಂದು ಇಲ್ಲಿ ವಾದ ಮಾಡಿ ಗೆಲ್ಲಲ್ಲು ಸಾಧ್ಯವಿಲ್ಲ ). ಹಾಗೆಂದು ಹುಲಿಯು ಇಲ್ಲಿನ ಜನರಿಗೆ ಪರಿಚಿತ ಇಲ್ಲವೆಂದೇನಲ್ಲ. ಆಗೊಮ್ಮೆ ಈಗೊಮ್ಮೆ ನಮ್ಮ ದನವನ್ನು ಹುಲಿ ಹಿಡಿಯಿತು ಎಂದು ಹೇಳುವುದನ್ನು ಕೇಳಿದ್ದೇನೆ ಆದರೆ ಈ ಮಾತುಗಳು ಕೇಳಿ ಬರುತ್ತಿದ್ದುದು ತುಂಬಾ ದಟ್ಟ ಅರಣ್ಯಗಳ ಹೊರ ಅಂಚಿನಲ್ಲಿ ವಾಸ ಮಾಡುವ ಜನರ ಬಾಯಲ್ಲೇ ಹೊರತು ಮನುಷ್ಯ ತನ್ನ ಪ್ರಾಬಲ್ಯತೆ ಮೆರೆಯುತ್ತಿರುವ ನಗರ ಪ್ರದೇಶಗಳಲ್ಲಿ ಅಲ್ಲ . 2014 ವರ್ಷದ ಕೊನೆಯ ತಿಂಗಳುಗಳು ಅಂದರೆ ನವೆಂಬರ್ ಹಾಗು ಡಿಸೆಂಬರ್ ಹೊತ್ತಿಗೆ ಇದ್ದಕ್ಕಿದ್ದ ಹಾಗೆ ಕೊಪ್ಪ, ಎನ್ ಆರ್ ಪುರ ಹಾಗು ಶೃಂಗೇರಿ ತಾಲೂಕಿನ ಕೆಲ ಊರುಗಳಲ್ಲಿ 'ಹುಲಿ' ತಟ್ಟೆ oದು ಪ್ರತ್ಯಕ್ಷ ಆಗಿ ಬಿಟ್

ಯಾರು ಈ ಪ್ರಾಣಿ ಹಂತಕರು ???

Image
. ವನ್ಯ ಜೀವಿ ಸಂರಕ್ಷಣೆ ಎಂದು ಒಂದೆಡೆ ಸರ್ಕಾರಗಳು ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ! ಪ್ರಾಣಿ ಪ್ರಿಯರಂತೂ ಸಾಮಾಜಿಕ ಜಾಲತಾಣಗಳಲ್ಲಿ ದಿನಂಪ್ರತಿ ಇದರ ಬಗ್ಗೆ ಚರ್ಚೆಗಳನ್ನು ನಡೆಸುತ್ತಾರೆ ! ನಿಜವಾದ ಕಾಳಜಿ ಇರುವವರು ಬೀದಿಗಿಳಿದು ಹೋರಾಟವನ್ನೂ ಮಾಡುತ್ತಾರೆ !! ಇದರೆಲ್ಲದರ ನಡುವೆಯೇ ಇತ್ತೀಚಿಗೆ ಫೇಸ್ ಬುಕ್ ನಲ್ಲಿ ಅಪ್ಲೋಡ್ ಆದ ಕೆಲವು ಇಮೇಜ್ ಗಳು ನಿಜಕ್ಕೂ ಗಾಬರಿಯನ್ನುಂಟು ಮಾಡಿದವು . ಕೋವಿಗಳನ್ನು ಹಿಡಿದುಕೊಂಡು ಕಾಡಲೆಯುತ್ತಾ, ಮೊಲವೊಂದನ್ನು ಹಿಡಿದು ಪೋಸ್ ಕೊಡುತ್ತಾ ರಾಜಾರೋಷವಾಗಿ 'ವನ್ಯ ಜೀವಿ ಸಂರಕ್ಷಣಾ ಕಾಯ್ದೆ' ಗೆ ಸೆಡ್ಡು ಹೊಡೆದು ತಮ್ಮ ಸಾಹಸವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ ಆ  'ಮನುಷ್ಯರು???' ನ್ನು ನೋಡಿದ ಯಾವುದೇ ಪ್ರಾಣಿ ಪ್ರಿಯನ ರಕ್ತ ಕುದಿಯದೆಯೇ ಇದ್ದದ್ದಿಲ್ಲ . ಇದನ್ನು ನೋಡಿದ ಕೂಡಲೇ ನಮ್ಮ ಸಾಮಾಜಿಕ ಜಾಲ ತಾಣದ ವನ್ಯ ಜೀವಿ ಸಂರಕ್ಷಕರು ಇವರ ಕಾರ್ಯದ ವಿರುದ್ದ ಮುಗಿಬಿದ್ದರು..ಸಾಧ್ಯವಾದಷ್ಟು ಪೇಜ್ ಗಳಲ್ಲಿ ಅದನ್ನು ಶೇರ್ ಮಾಡಿದರು. ಅವರ 'ಪೋಸ್ಟ್ ಶೇರ್' ಪ್ರಭಾವದಿಂದಲೋ ಏನೋ ಇದು ಅರಣ್ಯ ಇಲಾಖೆಯ ಗಮನಕ್ಕೆ ಹೋಗಿ ಇಂದು ಮೀಡಿಯಾಗಳಲ್ಲಿ ಅದರ ಬಗ್ಗೆ ಪ್ರಸ್ತಾಪವಾಗಿದೆ .ಈ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ವನ್ಯ ಜೀವಿ ಪ್ರಧಾನ ಸಂರಕ್ಷಣಾಧಿಕಾರಿ ವಿನಯ್ ಲೂತ್ರಾರವರು ತಕ್ಷಣವೇ ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ದ ವನ್ಯ ಜೀವಿ ಸಂರಕ್ಷಣಾ ಖಾಯಿದೆಯಡ

ಹೊಸ ಬ್ಲಾಗ್ ????

ಪ್ರಿಯ ಓದುಗ ಮಿತ್ರರೇ ಸರಿಸುಮಾರು ಒಂದು ವರ್ಷದಿಂದ ನಾನು ಬ್ಲಾಗ್ ನಲ್ಲಿ ಯಾವುದೇ ಪೋಸ್ಟ್ ಗಳನ್ನು ಪ್ರಕಟಿಸಿಲ್ಲ. ಯಾವುದೋ technology ಸಮಸ್ಯೆಯಿಂದ ನನ್ನ ಬ್ಲಾಗ್ ನಲ್ಲಿದ್ದ ಎಲ್ಲಾ ಪೋಸ್ಟ್ ಗಳ ಇಮೇಜ್ ಗಳು ಅಳಿಸಿಹೋದವು. ಈ ಬಗ್ಗೆ ಗೂಗಲ್ ನವರನ್ನು ಸಂಪರ್ಕಿಸಿದರೂ ಪ್ರಯೋಜನವಾಗಲಿಲ್ಲ. ಹಾಗಾಗಿ ಕಳೆದ ವರ್ಷ ಹೊಸ ಲೇಖನಗಳನ್ನು ಪ್ರಕಟಿಸಿಲ್ಲ. ಈಗ ಮತ್ತೆ ಬಂದಿದ್ದೇನೆ. ಹೊಸದೊಂದು ಬ್ಲಾಗ್ ಮಾಡಿ ಅಲ್ಲಿ ಹೊಸ ಲೇಖನಗಳನ್ನು ಪ್ರಕಟಿಸುವ ಯೋಚನೆ ನನ್ನಲ್ಲಿದೆ. ಇದಕ್ಕೆ ನಿವೇನನ್ನುತ್ತೀರಿ ? ಹೊಸ ಬ್ಲಾಗ್ ತೆರೆಯಲೋ ಅಥವಾ ಇಲ್ಲೇ ಹೊಸ ಲೇಖನಗಳನ್ನು ಪ್ರಕಟಿಸಲೋ?????? ನಿಮ್ಮ ಪ್ರತಿಕ್ರಿಯೆಗಾಗಿ ಕಾಯುತ್ತಿರುವೆ....