-ಬಿಸಿಲ ದಗೆಗೆ ಬೇಯುತ್ತಿದೆ ಜೀವ ಸಂಕುಲ-
.ಅಬ್ಬಾ....ಏನು ಸೆಖೆ ರೀ ಈ ವರ್ಷ...ಹಿಂದೆಂದೂ ನೋಡಿರಲಿಲ್ಲ ಇಂತಹ ಸೆಖೆ ಯನ್ನು....

ಇಂಥ ಮಾತುಗಳು ಈಗ ಸರ್ವೆ ಸಾಮಾನ್ಯವಾಗಿದೆ.ಇಡೀ ಜೀವ ಸಂಕುಲವೇ ಈ ಬಾರಿಯ ಬಿರು ಭೇಸಿಗೆಗೆ ತತ್ತರಿಸಿಹೋಗಿದೆ

.ಭಾರತದ ಹಲವು ಪ್ರದೇಶಗಳಲ್ಲಿ ಭೇಸಿಗೆ ಈ ಬಾರಿ ತನ್ನ ರುದ್ರರೂಪವನ್ನು ತೋರಿಸಿದೆ.ಕರ್ನಾಟಕದಲ್ಲಂತೂ ಬರ ಪರಿಸ್ಥಿತಿ ತಲೆದೂರಿದೆ

.ಸಾಧಾರಣವಾಗಿ ಉತ್ತರ ಕರ್ನಾಟಕದಲ್ಲಿ ಹಾಗು ಕರಾವಳಿ ಜಿಲ್ಲೆಗಳಲ್ಲಿ  ಯಾವಾಗಲು ಹೆಚ್ಚಿನ  ತಾಪಮಾನವಿರುತ್ತದೆ.ಆದರೆ ಈ ಬಾರಿ ಆ ತಾಪಮಾನವನ್ನೂ ಮೀರಿ ಉಷ್ಣಾಂಶ ದಾಖಲಾಗುತ್ತಿದೆ

.ಇನ್ನು ಮಲೆನಾಡಿನಲ್ಲಿ ಮಿತಿ ಮೀರಿದ ಉಷ್ಣಾಂಶ ಇಲ್ಲಿನ ಜನರ ಬದುಕಿನ ಮೇಲೆ ನೇರ ಪರಿಣಾಮವನ್ನು ಬೀರಲಾರಂಭಿಸಿದೆ

.ಇಂತಹ ಹೆಚ್ಚಿನ ಉಷ್ಣಾಂಶವನ್ನು ನಾನು ಕೂಡ ಈ ಹಿಂದೆ ನೋಡಿರಲಿಲ್ಲ.ಶುಭ್ರ ನೀಲಿ ಆಕಾಶದಲ್ಲಿ ಮಧ್ಯಾನ್ಹದ ನಂತರ ಮೋಡಗಳು ಕಾಣುತ್ತವೆಯಾದರೂ ಅವುಗಳ ಮಳೆಯಾಗಿ ಪರಿವರ್ತನೆಗೊಳುತ್ತಿಲ್ಲ .ಎಲ್ಲೊ ಒಂದೆರಡು ಕಡೆ ಮಳೆ ಬಂದರೂ ಕೂಡ ಮಳೆ ಬಂದು ಹೋದ ನಂತರದ ದಿನಗಳಲ್ಲಿ ತಾಪಮಾನ ಅತ್ಯಧಿಕವಾಗಿರುತ್ತದೆ 

.ಮಲೆನಾಡಿನ ಜೀವ ನದಿ ತುಂಗೆಯಂತೂ ಬಳಲಿ ಬೆಂಡಾಗಿ ಹೋಗಿದ್ದಾಳೆ.ಹೆಚ್ಚಿನ ಕಡೆಯಲ್ಲಿ ಅವಳನ್ನು ನದಿ ಎಂದು ಕರೆಯಲು ಸಹ ಆಗದ ಸ್ಥಿತಿಯಲ್ಲಿದ್ದಾಳೆ

.ಇನ್ನು ಉದ್ಯಾನನಗರಿ ಎಂದು ಕರೆಸಿಕೊಳ್ಳುವ ಬೆಂಗಳೂರಿನಲ್ಲಿ ಇತ್ತೀಚಿಗೆ ನಡೆಯುತ್ತಿರುವ ಮರಗಳ ಮಾರಣ ಹೋಮದಿಂದ ಉಷ್ಣಾಂಶ ಮಿತಿಮೀರತೊಡಗಿದೆ.ಮರಗಳ ಮಾರಣ ಹೋಮದ ಬಿಸಿ ಈಗಾಗಲೇ ಬೆಂಗಳೂರಿಗರಿಗೆ ತಟ್ಟುತ್ತಿದೆ   

.ಇಷ್ಟೆಲ್ಲಾ ಉಷ್ಣಾಂಶ  ಏರುತ್ತಿದ್ದರೂ ಇದು ಮಾನವನ ಮೇಲೆ ಬೀರುವ ಪರಿಣಾಮಕ್ಕಿಂತ ವನ್ಯ ಜೀವಿಗಳ ಮೇಲೆ ಬೀರುವ ಪರಿಣಾಮ ಅತ್ಯಂತ ಘೋರವಾದದ್ದು

.ನಾವಾದರೂ ಬಿಸಿಲಿನ ಹೊಡೆತದಿಂದ ತಪ್ಪಿಸಿಕೊಂಡು, ಕೃತಕ ಹವಾಮಾನ ಸೃಷ್ಟಿಸಿಕೊಳ್ಳುತ್ತೇವೆ.ಅದೇ ಕಾಡು ಪ್ರಾಣಿಗಳ ಪರಿಸ್ಥಿತಿ.... ಹೊಟ್ಟೆ ಹಸಿವನ್ನು ನೀಗಿಸಿಕೊಳ್ಳಲು ಬಿಸಿಲಿಗೆ ಬರಲೇಬೇಕು..ಅಲ್ಲದೆ ನಮಂತೆ ಅವುಗಳಿಗೆ ಕೃತಕ ಹವಾಮಾನ ಸೃಷ್ಟಿಸಲು ಸಾಧ್ಯವಿಲ್ಲ

.ಮುಖ್ಯವಾಗಿ ಕಾಡು ಪ್ರಾಣಿಗಳಿಗೆ ಎದುರಾಗುವ ಸಮಸ್ಯೆ ನೀರಿನದ್ದು.ನೀರಿನ ಹೊಂಡಗಳು,ಕೆರೆಗಳು ಬಿಸಿಲಿನ ತೀವ್ರತೆಗೆ ಬತ್ತಿ ಹೋಗಿರುವುದರಿಂದ ಕುಡಿಯಲು ನೀರಿಲ್ಲದೆ ಅವುಳಗ ಜೀವನ ಮೂರಾಬಟ್ಟೆಯಾಗಿರುವುದಂತೂ ಸತ್ಯ

.ದೈತ್ಯ ಜೀವಿ ಆನೆಗಳಿಗಂತೂ ಭೇಸಿಗೆ ಜೀವನ ಬಲು ಕಷ್ಟ.ಅವುಗಳಿಗೆ ದಿನಕ್ಕೆ 100 ರಿಂದ 150 ಲೀಟರ್ ನಷ್ಟು ನೀರಿನ ಅವಶ್ಯಕತೆ ಇರುವುದರಿಂದ ಅಷ್ಟು ಪ್ರಮಾಣದ ನೀರನ್ನು ಅರಸುತ್ತಾ ಸಾಗುವ ಅವುಗಳ ದಾರಿಯಲ್ಲಿ ನಾವು ಮನುಷ್ಯರು ರೆಸಾರ್ಟ್ ಗಳನ್ನು,ಜಮೀನನ್ನು ಮಾಡಿ ಕೂತಿರುವುದರಿಂದ ಅವುಗಳು  ಬಹಳ ಕಷ್ಟ ಪಡುತ್ತವೆ

.ಆನೆಗಳು ಈ ರೀತಿ ನೀರಿಗೆ ಕಷ್ಟ ಪಡುವ  ಸನ್ನಿವೇಶವನ್ನು ವನ್ಯ ಜೀವಿ ತಜ್ಞ ಸಂಜಯ್ ಗುಬ್ಬಿಯವರು ಬಂಡೀಪುರ ಅಭಯಾರಣ್ಯದಲ್ಲಿ ಚಿತ್ರಿಸಿದ್ದಾರೆ

.ಒಂದು ಭೇಸಿಗೆಯ ಮಧ್ಯಾನ್ನದಲ್ಲಿ ಸಂಜಯ್ ರವರು ಬಂಡೀಪುರದಲ್ಲಿ ಚಿತ್ರ ತೆಗೆಯುತ್ತಿದ್ದಾಗ ಕಂಡು ಬಂದ ಘಟನೆಯನ್ನು ಕೆಳಗೆ ಚಿತ್ರ ಸಮೇತವಾಗಿ ಪ್ರಕಟಿಸಲಾಗಿದೆ

.ಸುಮಾರು ಮಧ್ಯಾನ್ಹ  3.20 ರ ಸಮಯ.ನೀರನ್ನು ಅರಸುತ್ತಾ ಬಳಲಿರುವ ಆನೆಗಳ ಗುಂಪು ಅಲ್ಲೇ 600 ಮೀಟರ್ ದೂರದಲ್ಲಿದ್ದ ಒಂದು ನೀರಿನ ಹೊಂಡದ ಬಳಿ ತೆರಳಲು ಸಾಗುತ್ತವೆ .ಈ ಆನೆಯ ಗುಂಪಿನಲ್ಲಿ ಮರಿಗಳು ಕೂಡ ಇವೆ.ಆದರೆ ಅದರ ದಾರಿಯಲ್ಲಿ  Soo Called ಬುದ್ದಿವಂತ ಮನುಷ್ಯ ತನ್ನ ತೆವಲು ತೀರಿಸಿಕೊಳ್ಳಲು ರೆಸಾರ್ಟ್ ಗಳನ್ನು ಮಾಡಿ,ಅದಕ್ಕೆ ಕಾಡು ಪ್ರಾಣಿಗಳಿಂದ ತೊಂದರೆ ಆಗದಿರಲಿ ಎಂದು ಒಂದಷ್ಟು ನಾಯಿಗಳನ್ನೂ ಹಾಗು Security guard ಗಳನ್ನು ನೇಮಕ ಮಾಡಿದ್ದಾನೆ

.ಹೀಗಾಗಿ ಕೇವಲ 600 ಮೀಟರ್ ದೂರದ ನೀರಿನ ಹೊಂಡದ ಬಳಿ ಬರಲು ಈ ಆನೆಗಳ ಗುಂಪಿಗೆ ಒಂದು ಘಂಟೆಗೂ ಹೆಚ್ಚು ಕಾಲ ಹಿಡಿಯುತ್ತದೆ.ಮೊದಲೇ ಬಳಲಿ ಬೆಂಡಾಗಿ ಹೋಗಿರುವ ಆನೆಗಳಿಗೆ ಅಲ್ಲಿ ಮಾನವನಿಂದಾದ ಮೊದಲ ''ಉಪಕಾರ??'' ಇದು

 .ಅಂತೂ ಕಷ್ಟ ಪಟ್ಟು ನೀರಿನ ಹೊಂಡದ ಬಳಿ ಬರುವ ಆನೆಗಳು ತಮ್ಮ ದಾಹವನ್ನು ನೀಗಿಸಿಕೊಳ್ಳಲು ನೀರನ್ನು ಕುಡಿಯಲು ಶುರು ಮಾಡುತ್ತವೆ

.ಅಷ್ಟರಲ್ಲಿ ಇದ್ದಕ್ಕಿದಂತೆ ಒಂದು ಹೆಣ್ಣು ಆನೆ ಹಿಂದೆ ತಿರುಗಿ ಅಪಾಯದ ಕೂಗನ್ನು ಕೂಗುತ್ತದೆ
  .ನೋಡಿದರೆ ಅಲ್ಲಿ ರೆಸಾರ್ಟ್  ನಾಯಿಗಳು ಆನೆಗಳ ಮೇಲೆ ಯುದ್ದಕ್ಕೆ ಬಂದಿರುತ್ತವೆ


                             Image Courtesy-ಸಂಜಯ್ ಗುಬ್ಬಿ

.ಆನೆಗಳು ಭೇಸಿಗೆಯಲ್ಲಿ ಹೆಚ್ಚಿನ ಸಮಯವನ್ನು ನೀರಿನ ಹೊಂಡಗಳ ಬಳಿ ಕಳೆಯುತ್ತವೆ.ಆದರೆ ಇಲ್ಲಿ ಅವಿನ್ನೂ ಬಂದು ಸರಿಯಾಗಿ ನೀರು ಕುಡಿದಿಲ್ಲ ಅಷ್ಟರಲ್ಲೇ ಅವುಗಳು ನಾಯಿಗಳ ದೆಸೆಯಿಂದ ನೀರಿನ ಹೊಂಡ ಬಿಟ್ಟು ಬಂದ ದಾರಿಯಲ್ಲಿ ವಾಪಾಸ್ ಸಾಗುತ್ತವೆ .ನೀವು ಕೇಳಬಹುದು ಆನೆಗಳು ಎಲ್ಲಿ ,ನಾಯಿಗಳು ಎಲ್ಲಿ ಎಂದು ಆದರೆ ಈ ಆನೆಗಳ ಗುಂಪಿನಲ್ಲಿ ಮರಿಗಳಿವೆ.ಆನೆಗಳು ಅವುಗಳ ರಕ್ಷಣೆಗೆ ಮೊದಲ ಆದ್ಯತೆ ನೀಡುತ್ತವೆ .ಹೀಗೆ ಒಂದೆರಡು ಆನೆ ಮರಿಗಳನ್ನು ಸುತ್ತುವರಿದು ಅವುಗಳಿಗೆ ರಕ್ಷಣೆ ಕೊಟ್ಟರೆ,ಉಳಿದೆರಡು ಆನೆಗಳು  ನಾಯಿಗಳನ್ನು ಓಡಿಸಲು ಮುಂದಾಗುತ್ತವೆ .ಕೊನೆಗೆ ನಾಯಿಗಳ ಕಾಟದಿಂದ ಭೆಸತ್ತ ಆನೆಗಳು ಬಂದ ದಾರಿಯಲ್ಲೇ ತಮ್ಮ ಮರಿಗಳನ್ನು ಸುತ್ತುವರಿದುಕೊಂಡೇ ತೆರಳುತ್ತವೆ .ಮತ್ತೆ ಅವುಗಳು ನೀರನ್ನು ಕುಡಿಯಲು ಅದಿನ್ನೆಷ್ಟು ದೂರ ಸವೆಸಬೇಕೂ ಎಂದು ಸಂಜಯ್ ಕಳವಳ ವ್ಯಕ್ತ ಪಡಿಸುತ್ತಾರೆ

.ನಿಜವಾಗಿಯೂ ಇದು ಮಾನವ ಸಮಾಜ ತಲೆ ತಗ್ಗಿಸುವಂತಹ ದೃಶ್ಯ. ನಾವಿರುವ ಜಾಗಗಳನ್ನು ಹಾಳು ಮಾಡಿದ್ದಲದೇ ಕಾಡಿಗೆ ನುಗ್ಗಿ,ಅವುಗಳ ಬದುಕನ್ನು ಹಿಂಸಿಸುವ ಮಾನವನ ಈ ರಾಕ್ಷಸೀ ಗುಣ ಮಾನವನ್ನ ವಿನಾಶವನ್ನು ಸೂಚಿಸುವ ಮುನ್ಸೂಚನೆಯಷ್ಟೇ

.ಇದು ಕೇವಲ ಅನೆಗಳ ವ್ಯತೆಯಲ್ಲ,ಕಾಡಿನ ಎಲ್ಲಾ ಪ್ರಾಣಿಗಳು ಒಂದೆಡೆ ಭೇಸಿಗೆಯಿಂದ ನರಳುತ್ತಿದ್ದರೆ,ಇನ್ನೊಂದೆಡೆ ಮಾನವನ ಕಾಟದ  ಮದ್ಯೆ ನಲುಗುತ್ತಿವೆ.ಕಾಡು ಪ್ರಾಣಿಗಳ ದಾರಿಯಲ್ಲಿ ರೆಸಾರ್ಟ್ ಮಾಡುವುದು,ಅವುಗಳಿಗೆ ಅಲ್ಪ ಸ್ವಲ್ಪ ಉಳಿದ ಹುಲ್ಲಿಗೆ ಬೆಂಕಿ ಕೂಡುವುದು ಇಂತಹ ಮಾನವನ ನೀಚ ಕೃತ್ಯಗಳು ಅವುಗಳಿಗೆ ಭೇಸಿಗೆಗಿಂತ ಹೆಚ್ಚು ಕಷ್ಟವನ್ನು ನೀಡುತ್ತಿದೆ

.ಆದರೆ ಪ್ರಕೃತಿ ಯಾರನ್ನೂ ಬಿಡುವುದಿಲ್ಲ... ಭೇಸಿಗೆಯ ದಗೆಯಲ್ಲಿ ಮಾನವ ಒದ್ದಾಡುತ್ತಿರುವುದೇ ಇದಕ್ಕೆ ಉದಾಹರಣೆ.ಮಾನವನೇನೂ ಕೃತಕ ವಾತಾವರಣ ನಿರ್ಮಿಸಿಕೊಂಡು ಭೇಸಿಗೆಯನ್ನು ಸಮರ್ಥವಾಗಿ ಎದುರಿಸುತ್ತೇನೆ ಎಂದು ಹೇಳಬಹುದು.ಆದರೆ ತಿನ್ನುವ ಅನ್ನ,ಉಸಿರಾಡುವ ಗಾಳಿ,ಕುಡಿಯುವ ನೀರು ಇವುಗಳನ್ನು ಕೃತಕವಾಗಿ ಸೃಷ್ಟಿಸಿ ಬದುಕುವುದು ಮಾನವನಿಗೆ ಯಾವುದೇ ಯುಗದಲ್ಲೂ ಸಾಧ್ಯವಿಲ್ಲ.ಇದನ್ನರಿತು ನಾವು ಈಗಲಾದರೂ ಎಚ್ಚೆತ್ತುಕೊಳ್ಳಬೇಕು

.ಯಾವ ಪ್ರದೇಶದಲ್ಲಿ ಕಾಡು ಸಮೃದ್ದವಾಗಿರುತ್ತದೂ ಅಂತಹ ಪ್ರದೇಶದ ಜನ ಎಂದಿಗೂ ಭೇಸಿಗೆಯ ಹೊಡೆತದಿಂದಾಗಲಿ  ಅಥವಾ ಮಳೆಯ ಅರ್ಭಟದಿಂದಾಗಲಿ  ನೋವನ್ನು ಅನುಭವಿಸುವುದಿಲ್ಲ.ಅದೇ ಕಾಡನ್ನು ಕಡಿದು ನಾಡನ್ನು ಬೆಳೆಸುತ್ತಾ ಹೋದರೆ ಇಂದು ನಾವು ಮಲೆನಾಡಿನಲ್ಲಿ ಅನುಭವಿಸುತ್ತಿರುವ ಪರಿಸ್ಥಿತಿ ಉದ್ಭವವಾಗುತ್ತದೆ

.ಇನ್ನಾದರೂ ನಾವು ಎಚ್ಚೆತ್ತು ಕಾಡನ್ನು ಹೆಚ್ಚು ಹೆಚ್ಚು ಬೆಳಿಸಿ ವಾತಾವರಣವನ್ನು ಕಪಾಡಬೇಕಿದೆ.ಅದರಿಂದಾಗಿ ಮಾನವ ಹಾಗು ವನ್ಯ ಜೀವಿಗಳು ಇಬ್ಬರೂ ನೆಮ್ಮದಿಯ ಬದುಕನ್ನು ಕಂಡುಕೊಳ್ಳಬಹುದು

ಇಲ್ಲವಾದಲ್ಲಿ
.ಹಿಂದೊಮ್ಮೆ ತನ್ನ ಮೇಲೆ ನಡೆದ ವಾತಾವರಣದ ರೌದ್ರತೆಯನ್ನು ಮತ್ತೆ ಈಗ ನಡೆಸಲು ಈ ಧರಿತ್ರಿ ಸಿದ್ದಳಾಗುತ್ತಾಳೆ 

-ಪ್ರಕೃತಿಯನ್ನು ರಕ್ಷಿಸಿ- 

(ವಿಶೇಷ  ಸೂಚನೆ -ಈ ಬ್ಲಾಗ್ ಗೆ ಹೊಸ ರೂಪ ನೀಡಿರುವುದರಿಂದ ಹಿಂದೆ ಇದ್ದ ಹಲವು Gadget ಗಳು ಈಗ ಲಭ್ಯವಿರುವುದಿಲ್ಲ.Blog Archive ಹಾಗು ಇನ್ನಿತರ ಮಾಹಿತಿಗಾಗಿ ಬ್ಲಾಗ್ ಪೇಜ್ ನ ಭಾಲಭಾಗದಲ್ಲಿರುವ dock ಮೇಲೆ ಕ್ಲಿಕ್ಕ್ಕಿಸಿ)


Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....