-ಹಸಿರು ಹಾದಿಯಲ್ಲಿ ಹುಚ್ಚು ಪ್ರಯಾಣ-
.ಪ್ರಿಯ ಓದುಗ ಮಿತ್ರರೇ ಇದೇ ಪ್ರಥಮ ಬಾರಿಗೆ ನಾನು ಇಲ್ಲಿ ನನ್ನ ಪ್ರಾವಾಸದ ಅನುಭವ ಒಂದನ್ನು ವಿವರವಾಗಿ ಪೋಸ್ಟ್ ಮಾಡಿದ್ದೇನೆ

.ಇದು ಬಹಳ ಧೀರ್ಘವಾದ ಪೋಸ್ಟ್ ,ಪುರ್ಸೊತ್ ಮಾಡ್ಕೊಂಡು ಓದಿ

.ಈ ಪೋಸ್ಟ್ ನ TITLE ಸ್ವಲ್ಪ ವಿಚಿತ್ರ ಅಂತ ನಿಮಗನಿಸಬಹುದು.ನಮ್ಮ ಪ್ರವಾಸದ ಕತೆ ಕೇಳಿದ ಜನಗಳು ನಿಮಗೆ ಹುಚ್ಚು ಅಂತ ಹೇಳಿದ್ದರು so ನಾನು ಈ ಪೋಸ್ಟ್ title ಅನ್ನು ಹಸಿರು ಹಾದಿಯಲ್ಲಿ ಹುಚ್ಚು ಪ್ರಯಾಣ ಎಂದು ಬರೆದದ್ದು

.ನಾನು ಇಲ್ಲಿಯವರೆಗೆ ಪ್ರಕೃತಿಯ ಹಲವಾರು ಜಾಗಗಳಲ್ಲಿ ಸ್ನೇಹಿತರ ಜೊತೆ ಅಲೆದಾಡಿದ್ದೇನೆ.ಪ್ರತಿಯೊಂದು ಅಲೆದಾಟದಲ್ಲೂ ಒಂದು ಹೊಸ ಅನುಭವ.ಹಾಗಾಗಿಯೇ ಕಾಡು ಮೇಡು ಅಲೆಯುವುದೆಂದರೆ ನನಗೆ ಎಲ್ಲಿಲ್ಲದ ಪ್ರೀತಿ

.ಹೀಗೆ ಪ್ರಕೃತಿಯ ಸೌಂದರ್ಯ ಸವಿಯಲು ಹೋದ ಒಂದು ಪ್ರವಾಸದ ಅನುಭವ ನನ್ನ ಜೀವನದಲ್ಲಿ ಮರೆಯಲಾಗುವುದಿಲ್ಲ.ಅದನ್ನು ಇಲ್ಲಿ ನಿಮ್ಮ ಮುಂದೆ ಇಟ್ಟಿದ್ದೇನೆ.ಅದೂ ಪ್ರವಾಸ ಹೋದ ಬರೋಬ್ಬರಿ 1 ವರ್ಷದ ನಂತರ

.ಅದು 2009 ನವೆಂಬರ್ ನಾನಾಗ ಸಿಲಿಕಾನ್ ಸಿಟಿ ಯಲ್ಲಿದ್ದೆ.ಆ ನಗರದ ಜಂಜಾಟ ನೋಡಿ ನೋಡಿ ಮನಸ್ಸು ಬೇಸತ್ತಿತ್ತು.ಮನಸ್ಸು ಪ್ರಕೃತಿಯನ್ನು ಹಂಬಲಿಸುತ್ತಿತ್ತು .ಅದೇ ಸಮಯಕ್ಕೆ ಸರಿಯಾಗಿ ನನ್ನ ಆತ್ಮೀಯ ಸ್ನೇಹಿತ ರಾಜೇಶ್ ಕೂಡ ಎಲ್ಲಾದರು ಪ್ರವಾಸ ಹೋಗುವ ಬಗ್ಗೆ ವಿಷಯ ಎತ್ತಿದನು

.ಸರಿ ನನಗೂ ಬೇಕಾಗಿದ್ದು ಅದೇ.ಅವನು ಹಾಗೆ ಹೇಳಿದ ತಕ್ಷಣ ಅಂತರ್ಜಾಲದಲ್ಲಿ ಪ್ರಕೃತಿಯ ತಾಣಕ್ಕೆ ಹುಡುಕಾಟ ಆರಂಭಿಸಿದೆ but ನಮ್ಮ 2 ದಿನದ ಪ್ರವಾಸಕ್ಕೆ ತುಂಬಾ wild ಪ್ರದೇಶ ಯಾವುದೂ ಸಿಗಲಿಲ್ಲ

.ಇದರ ಮದ್ಯೆ ನನ್ನ ಗಮನ ಸೇಳದಿದ್ದು 'ಸಕಲೇಶಪುರ ಟು ಸುಬ್ರಮಣ್ಯ ಹಸಿರು ಹಾದಿ' ಇದನ್ನು ರಾಜೇಶ್ ಗೆ ಹೇಳಿದೆ .ಅವನೂ ಅದರ ಬಗ್ಗೆ ವಿಚಾರಿಸಿದ.ಆದರೆ ಈ place ಗೆ ಪ್ಯಾಕೇಜ್ trip ಗಳಿದ್ದು ಪ್ರದೇಶದ ಬಗ್ಗೆ ಹೆಚ್ಚಿನ ಹೊಸ ವಿವರಗಳು ಸಿಕ್ಕಲಿಲ್ಲ

.ಈ ಪ್ರದೇಶದ ಬಗ್ಗೆ ಒಂದು ಕಿರು ಪರಿಚಯ ನಿಮಗೆ ಮಾಡಿಕೊಡುತ್ತೇನೆ . ಸಕಲೇಶಪುರ ಟು ಸುಬ್ರಮಣ್ಯ ರೈಲ್ವೆ ಹಳಿಗಳ ನಡುವೆ ಇರುವ ಹಾದಿಯನ್ನೇ ಹಸಿರು ಹಾದಿ ಎಂದು ಕರೆಯುತ್ತಾರೆ .ಪ್ರಕೃತಿ ಇಲ್ಲಿ ಎಷ್ಟು ರುದ್ರ ರಮಣೀಯವಾಗಿ ಇದೆ ಅಂದರೆ ಅದನ್ನು ವರ್ಣಿಸಲಸಾದ್ಯ.ಹೀಗಾಗಿಯೇ ಇಲ್ಲಿ ವಾರಕ್ಕೆ 3 ದಿನ ಬೆಂಗಳೂರು ಟು ಮಂಗಳೂರು ರೈಲು ಹಗಲು ಸಂಚರಿಸುತ್ತದೆ .ಇಲ್ಲಿನ ಪ್ರಕೃತಿ ಆನಂದ ಸವಿಯಲ್ಲೆಂದೇ ಹಲವಾರು ಜನ ಈ ಹಗಲು ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ .ಒಟ್ಟು 50 km ಗೂ ಹೆಚ್ಚು ಉದ್ದವಿರುವ ಈ ದಾರಿಯಲ್ಲಿ 50 ಕ್ಕೂ ಹೆಚ್ಚು ಸುರಂಗಗಳು 90 ಕ್ಕೂ ಹೆಚ್ಚು ಸೇತುವೆಗಳು ಕಂಡುಬರುತ್ತದೆ .ಅಷ್ಟೂ ಹಾದಿ ದಟ್ಟವಾದ ಕಾಡಿನಿಂದ ಕೂಡಿದೆ.ಒಟ್ಟಿನಲ್ಲಿ ಹೇಳಬೇಕೆಂದರೆ ಜೀವ ಕೈಯಲ್ಲಿ ಹಿಡಿದುಕೊಂಡು ಮಾಡಬೇಕಾದ journey ಇದು

.ಇಷ್ಟು ವಿವರಗಳನ್ನು ತಿಳಿದ ನಮಗೆ ಆ ಪ್ಲೇಸ್ ಬಗ್ಗೆ ಕೂತೂಹಲ ಹೆಚ್ಚಿತು.ಆದರೆ ನಾವು ಅಲ್ಲಿಗೆ ಹೋಗಬೇಕೋ ಅಥವಾ ಬಿಡಬೇಕೋ ಎಂಬ ನಿರ್ಧಾರಕ್ಕೆ ಬರಲಾಗಲಿಲ್ಲ

.ನಾವು 24 ನೇ ತಾರೀಖು ಎಲ್ಲಿಗಾದರೂ ಹೊರಡಲೇ ಬೇಕೆಂದು ನಿರ್ಧರಿಸಿದ್ದೆವು.ಆದರೆ 23 ರ ರಾತ್ರಿಯವರೆಗೂ ಎಲ್ಲಿಗೆ ಅಂತ ಗೊತ್ತಿರಲಿಲ್ಲ

.23 ರ ರಾತ್ರಿ 12 .30 (24 ) ಗೆ ರಾಜೇಶ್ ಕಾಲ್ ಮಾಡಿ journey ಪ್ಲೇಸ್ ಬಗ್ಗೆ ಕೇಳಿದ .ನಾನು ಗೊತ್ತಿಲ್ಲ ಅಂದೆ.ಕೊನೆಗೂ ಅದೇ 'ಹಸಿರು ಹಾದಿಗೆ' ಹೋಗುವುದೆಂದು ಡಿಸೈಡ್ ಮಾಡಿದೆವು .ನೋಡಿ ನಮ್ಮ ಹುಚ್ಚಾಟ ಹೇಗಿದೆ ಎಂದು place ಡಿಸೈಡ್ ಮಾಡಿದ್ದು ಮಧ್ಯ ರಾತ್ರಿ,ಹೋಗಬೇಕಗಿದ್ದು ಬೆಳಗ್ಗೆ 6 ಘಂಟೆಗೆ

.24 ರ ಬೆಳಿಗ್ಗೆ 5 .30 ಎದ್ದ ನಾನು ಕೇವಲ 2 ಜೊತೆ ಬಟ್ಟೆಯೊಂದಿಗೆ 7 ಘಂಟೆಗೆ ಕೆಂಪೇಗೌಡ ಬಸ್ ಸ್ಟಾಪ್ ನಲ್ಲಿದ್ದೆ .ರಾಜೇಶ್ ಕೂಡ ಬಂದಿದ್ದ .ಅವನು ಕೂಡ ಒಂದು ಚಿಕ್ಕ ಬ್ಯಾಗ್ ತಂದಿದ್ದ .ಅಲ್ಲಿ ತಿಂಡಿ ಮುಗಿಸಿ ಸಕಲೇಶಪುರ ಹೋಗುವ ರಾಜ್ಯ ರಸ್ತೆ ಸಾರಿಗೆ ರಥವೇರಿ ಕುಳಿತೆವು

.ಮಧ್ಯಾನ್ಹ ಸರಿಸುಮಾರು 3 ಘಂಟೆಗೆ ನಾವು ಸಕ್ಲೇಶ್ ಪುರದಲ್ಲಿ ಇದ್ದೆವು.ಅಲ್ಲಿ ಊಟ ಮುಗಿಸಿ ನಂತರದ ನಮ್ಮ ಧೀರ್ಘ ಪ್ರಯಾಣಕ್ಕೆ ಒಂದಿಷ್ಟು ಹಣ್ಣು ಹಂಪಲು,ಬ್ರೆಡ್ ಖರೀದಿ ಮಾಡಿದೆವು .ಈಗ ನಮ್ಮ ಸರಕು ಸಾಮಗ್ರಿಗಳ ತೂಕ ಇನ್ನೂ ಹೆಚ್ಚಾಯಿತು

.ಒಂದು ಅದ್ಭುತ ಅನುಭವದ ನಿರೀಕ್ಷೆಯಲ್ಲಿ ಆಟೋ ಹತ್ತಿ ಸಕಲೇಶಪುರದ ರೈಲ್ವೆ ನಿಲ್ದಾಣಕ್ಕೆ ಬಂದೆವು


.ಒಂದು ದೊಡ್ಡ ಪೆಟ್ರೋಲ್ ಸರಕು ರೈಲು ಗಾಡಿ ಆ ನಿಲ್ದಾಣದಲ್ಲಿತ್ತು .ಸಂಜೆ 4 .30 ರ ಸಮಯ ಸಕಲೇಶಪುರದ ರೈಲ್ವೆ ನಿಲ್ದಾಣದಿಂದ ನಮ್ಮ ಮಹಾಯಾನ ಆರಂಭಿಸಿದೆವು .ನಮ್ಮ ಇವತ್ತಿನ ಗುರಿ 10 ನಡೆದು ಮುಂದಿನ ಧೋಣಿಗಾಲ್ ಎಂಬ ರೈಲ್ವೆ ಸ್ಟೇಷನ್ ತಲುಪುವುದು
.ರೈಲ್ವೆ track ಮೇಲೆ ನಡೆಯುವುದು ಒಂದು ತರ ಹಿಂಸೆಯ ಕೆಲಸ,ಜಲ್ಲಿ ಕಲ್ಲುಗಳು ಕಾಲನ್ನು ಮುಂದಕ್ಕೆ ಇಡಲು ಬಿಡುವುದೇ ಇಲ್ಲ
.ಇಲ್ಲಿ ಸಂಜೆಯ ಸಮಯ ಮನಸ್ಸಿಗೆ ಮುದ ನೀಡುತಿತ್ತು .ನಾಳೆಯ ಪ್ರಯಾಣ ನಮಗೆ ಇಂದು ನಡೆಯುವ ಉತ್ಸಾಹ ತಂದು ಕೊಟ್ಟಿತ್ತು

.ಸುಮಾರು ಧೂರ ನಡೆದಿದ್ದೆವು .ಆಗ ನಮಗೆ ಪ್ರಥಮವಾಗಿ ಈ ದಾರಿಯಲ್ಲಿ ಒಂದು ರೈಲಿನ ಕೂಗು ಕೇಳಿತು.ತಕ್ಷಣ ಪಕ್ಕದ ಸಣ್ಣ ಹೊಂಡಕ್ಕೆ jump ಮಾಡಿ ರೈಲನ್ನು ನೋಡಲು ಕಾತುರರಾಗಿ ನಿಂತೆವು .ನಾನು ಆಗಲೇ ಹೇಳಿದ ಸಕಲೇಶಪುರದ ನಿಲ್ದಾಣದಲ್ಲಿ ನಿಂತಿದ್ದ ಪೆಟ್ರೋಲ್ ಸರಕು ರೈಲು ಇದು .ಈ ರೈಲನ್ನು ನೋಡಿದ ನಾವು ಒಂದು ಕ್ಷಣ ಮುಖ ಮುಖ ನೋಡಿಕೊಂಡೆವು
.ಸಾಧಾರಣವಾಗಿ passanger ರೈಲು ನೋಡಿದ ನಮಗೆ ಈ ಗೂಡ್ಸ್ ರೈಲು ಆಶ್ಚರ್ಯ ಉಂಟು ಮಾಡಿತು .ಸುಮಾರು 3 ನಿಮಿಷಗಳ ಕಾಲ ಈ ರೈಲು ನಮ್ಮ ಮುಂದೆ ಚಲಿಸುತ್ತಲೇ ಇತ್ತು.ಅಷ್ಟು ದೊಡ್ಡ ರೈಲು ಗಾಡಿ ಇದು .ಇದನ್ನು ನೋಡಿಯೇ ನಮಗೆ ದಿಗಿಲು ಶುರುವಾಯಿತು.ವಾರಕ್ಕೆ 3 ರೈಲು ಹಗಲಿನಲ್ಲಿ ಇಲ್ಲಿ ಸಂಚರಿಸುತ್ತದೆ ಎಂಬ ನಡುವೆ ಗೂಡ್ಸ್ ರೈಲುಗಳ ಬಗ್ಗೆ ನಾವು ಮರೆತಿದ್ದೆವು

.ನಾನು ಏಕೆ ಹೇಳುತ್ತಿದ್ದೇನೆ ಅಂದರೆ ಇಲ್ಲಿ ಗೂಡ್ಸ್ ರೈಲುಗಳಿಗೆ ಸಮಯವಿರುವುದಿಲ್ಲ .ಹೆಚ್ಚಿನ ಗೂಡ್ಸ್ ರೈಲುಗಳು ಈ ಭಾಗದಲ್ಲಿ ಸಂಚರಿಸುತ್ತವೆ .ಸೇತುವೆಗಳು ಸುರಂಗಗಳು ಇಲೆಲ್ಲಾ ನಾವು ಅತ್ಯಂತ ಹುಷಾರಾಗಿ ನಡೆಯಬೇಕಿತ್ತು .ಅಕಸ್ಮಾತ್ ಸೇತುವೆಯ ಮದ್ಯದಲ್ಲೋ,ಸುರಂಗದ ಒಳಗೊ ನಾವು ನಡೆಯಬೇಕಾದರೆ ಈ ಗೂಡ್ಸ್ ರೈಲುಗಳು ಬಂದರೆ ನಮ್ಮ ಕತೆ ಮುಗಿಯಿತು

.ಇದನ್ನೇ ನೆನೆಸಿಕೊಂಡು ನಡೆಯುತ್ತಿದ್ದ ನಮ್ಮ ಗಮನ ಸೂರ್ಯನ ಕಡೆ ಹೋಯಿತು.ಸೂರ್ಯ ದಿಗಂತದಲ್ಲಿ duty ಮುಗಿಸಿ ಮನೆಗೆ ಹೊರಟಿದ್ದ .ಕತ್ತಲು ಆವರಿಸಲಾರಂಭಿಸಿತು .ನಾವಿನ್ನೂ 4 ,5 km ನಡೆಯಬೇಕಿತ್ತು.ಮನಸ್ಸಿನ ಒಂದು ಮೂಲೆಯಲ್ಲಿ ದಿಗಿಲು ಶುರುವಾಯಿತು

.ಇಲ್ಲಿ ಒಂದು ವಿಷಯವನ್ನು ನಾನು ನಿಮಗೆ ಹೇಳಲೇ ಬೇಕು .ನಾವು ಎಷ್ಟು ಬೇಜವಾಬ್ಧಾರಿಯ ಮನುಷ್ಯರು ಅಂದರೆ ನಮ್ಮಿಬ್ಬರ ಬಳಿಯಲ್ಲೂ (ನನ್ನ ಹತ್ತಿರ ಮಾತ್ರ ) ಮೊಬೈಲ್ ಬೆಳಕು ಬಿಟ್ಟರೆ ಬೇರೆ ಟಾರ್ಚ್ ಇರಲಿಲ್ಲ

.ನನ್ನ ಮೊಬೈಲ್ ಬೆಳಕಿನಲ್ಲಿ ಎಡವುತ್ತಾ ಬೀಳುತ್ತಾ ಬೇಗ ಬೇಗ ಹೆಜ್ಜೆ ಹಾಕಿದೆವು .ಸುತ್ತ ಮುತ್ತಲೂ ಮನುಷ್ಯರ ಸುಳಿವಿಲ್ಲ ,ದಟ್ಟವಾದ ಕಾಡು ಅದರ ಮಧ್ಯ ಎಲ್ಲಿ ಶಬ್ದ ಕೇಳಿದರೂ ರೈಲು ಬಂದಂತೆ ಅನ್ನಿಸುವುದು.ಒಟ್ಟಿನಲ್ಲಿ ಹೊಸ ಹೊಸ ಅನುಭವಗಳನ್ನು ಅನುಭವಿಸುತ್ತಾ ನಮ್ಮ destination ಪಾಯಿಂಟ್ ಬೇಗ ಸಿಗಲೆಂದು ಆಶಿಸುತ್ತಾ ಹೆಜ್ಜೆ ಹಾಕಿದೆವು

.ಅಂತು ಇನ್ನೇನು ದೋಣಿಗಾಲ್ ನಿಲ್ದಾಣ ಹತ್ತಿರ ಇದೆ ಅನ್ನುವಷ್ಟರಲ್ಲಿ ಒಂದು ಸಣ್ಣ ಸೇತುವೆ ಇದಿರಾಯ್ತು .ಆ ಸೇತುವೆಯ ಮೇಲೆ ನಡೆಯುವಾಗಲೇ ನಮಗೆ ಮುಂದೆ ಇರುವ ಕಷ್ಟಗಳ ಅರಿವಾಗಿದ್ದು .ಕೆಳೆಗೆ ಪ್ರಪಾತ ಅಕ್ಕ ಪಕ್ಕದಲ್ಲಿ ನಿಲ್ಲಲು ಸರಿಯಾದ ಸ್ಥಳವಿಲ್ಲ .ಕಾಲು ಸ್ಲಿಪ್ ಆದರೆ ನಮ್ಮ ಜೀವ ಗೋವಿಂದ.ಅದರ ಮದ್ಯೆ ರೈಲು ಭೀತಿ .ಒಟ್ಟಿನಲ್ಲಿ ಆದದ್ದಾಗಲಿ ಎಂದು ನಡೆದು ಮುಂದೆ ಸಾಗಿದೆವು

.ಅಂತೂ ಇಂತೂ ದೋಣಿಗಾಲ್ ನಿಲ್ದಾಣ ತಲುಪಿದೆವು .ಸಮಯ ರಾತ್ರಿ 7 .30 ಆಗಿತ್ತು

.ಅದು ಒಂದು ಪುಟ್ಟ ರೈಲ್ವೆ ನಿಲ್ದಾಣ.ಅಲ್ಲಿ ಇಬ್ಬರು ಅಧಿಕಾರಿಗಳು ಬಿಟ್ಟರೆ ಭೇರಾರು ಇರಲಿಲ್ಲ.ಅವರೊಂದಿಗೆ ಮಾತನಾಡಿ ನಾವು ಅಲ್ಲೇ ಸ್ವಲ್ಪ ತಗ್ಗಿನಲ್ಲಿ ಇದ್ದ ಒಂದು ರಸ್ತೆಯ ಮೂಲಕ ಕೆಳಗೆ ಇದ್ದ main ರೋಡ್ ಗೆ ಇಳಿದು ಅಲ್ಲಿದ್ದ ಒಂದು ಚಿಕ್ಕ ಅಂಗಡಿಯಲ್ಲಿ ಚಹಾ ಕೊಡಿದು ಪುನಃ ನಿಲ್ದಾಣಕ್ಕೆ ಬಂದು ಅಲ್ಲಿದ್ದ ಒಬ್ಬ ಹೊರ ರಾಜ್ಯದ ಅಧಿಕಾರಿಯ ಹತ್ತಿರ ಹರಟುತ್ತಾ ಕುಳಿತೆವು

.ಹೊಟ್ಟೆ ಚುರುಗುಡಲು ಆರಂಭಿಸಿದ ನಂತರ ನಾವು ಅಲ್ಲೇ ಇದ್ದ ಒಂದು ಚಿಕ್ಕ ಫಾಲ್ಸ್ ಹತ್ತಿರ ಹೋಗಿ ಮಧ್ಯಾನ್ಹ ಸಕಲೇಶಪುರದಿಂದ ತಂದ ಪಲಾವ್ ತಿಂದೆವು .ಅಲ್ಲೇ ಬಾಲ ಅಲ್ಲಾಡಿಸುತ್ತ ನಿಂತಿದ್ದ ಎರಡು ನಾಯಿಗಳಿಗೂ ಸ್ವಲ್ಪ ಕೊಟ್ಟು ಊಟದ ಕಾರ್ಯ ಮುಗಿಸಿದೆವು


.ಆ ನಿಲ್ದಾಣದಲ್ಲಿದ್ದ ಕಲ್ಲು ಬೆಂಚುಗಳ ಮೇಲೆ ನಾವು ಈ ರಾತ್ರಿ ಕಳೆಯಬೇಕಿತ್ತು .ಊಟದ ನಂತರ ಅಲೆಲ್ಲಾ ಸ್ವಲ್ಪ ಅಲೆದಾಡಿ ಮಲಗಲು ಹೊರಟೆವು.ಆಗ ಸಮಯ ರಾತ್ರಿ 9 .30

.ಚಳಿ ತನ್ನ ಉಗ್ರ ಸ್ವರೂಪವನ್ನು ನಿಧಾನವಾಗಿ ಪ್ರಾರಂಭಿಸಿತು.ರಾಜೇಶ್ ಒಂದು ಬೆಡ್ ಶೀಟ್ ತಂದಿದ್ದ ,ಅದನ್ನು ಹೊದ್ದು ನಿದ್ರೆಗೆ ಜಾರಿದ .ನಾನು ಬೆಡ್ ಶೀಟ್ ತಂದಿರಲಿಲ್ಲ .ನನ್ನ ಹತ್ತಿರ ಇದ್ದ towel ಹೊದ್ದು ಮಲಗಿದೆ

.ಆದರೆ ಚಳಿ ನನ್ನನ್ನು ಮಲಗಲು ಬಿಡಲಿಲ್ಲ .ಕಪ್ಪು ಕತ್ತಲು ,ಅಲ್ಲೇ ಬೀಳುತ್ತಿದ್ದ ಚಿಕ್ಕಜಲಪಾತದ ಸದ್ದು,pin drop silence ,ಪ್ರಾಣ ಹಿಂಡುವ ಚಳಿ.ನಾನು ಎಷ್ಟೇ ಪ್ರಯತ್ನ ಪಟ್ಟರೂ ನಿದ್ರಾ ದೇವಿ ಒಲಿಯಲಿಲ್ಲ .ಸರಿ ಎಂದು ಚಳಿಯಲ್ಲೇ ನಡುಗುತ್ತ ಮೊಬೈಲಿನಲ್ಲಿ ಹಾಡು ಕೇಳುತ್ತ ಕುಳಿತೆ

.ನನಗೆ ಮ್ಯೂಸಿಕ್ ಅಂದ್ರೆ ಪ್ರಾಣ.ನಾನು ಈಗಾಗಲೇ 18 headset ಹಾಳು ಮಾಡಿಕೊಂಡಿದ್ದೇನೆ.19 ನೆಯದನ್ನು ಹೊಸದಾಗಿ ಕೊಂಡು ತಂದಿದ್ದೆ ಇಲ್ಲಿಗೆ .ರಾತ್ರಿ 12 ರ ವರೆಗೆ ಹಾಡು ಕೇಳಿದ ನಾನು ಎದ್ದು ಅಲೆಲ್ಲಾ ಒಂದು ಸುತ್ತು ತಿರುಗಾಡಿದೆ

.ಮತ್ತೆ 12 .30 ಕ್ಕೆ ಮಲಗಿದಾಗ ನಿದ್ರೆ ಹತ್ತಿತು.ಮಲಗಿದ ಅರ್ಧ ಘಂಟೆಯಲ್ಲೇ ಮತ್ತೆ ಎಚ್ಚರವಾಯಿತು.ಮತ್ತೆ ನಿದ್ರೆ ಬರಲೇ ಇಲ್ಲ ಸರಿ ಹಾಡು ಕೇಳೋಣ ಎಂದು headset ಹುಡುಕುತ್ತೇನೆ ಅದೂ ಇಲ್ಲ.ಆಶ್ಚರ್ಯಗೊಂಡು ಅಲೆಲ್ಲಾ ಹುಡುಕಿ ನಿಲ್ದಾಣದ ಬಾಗಿಲಿಗೆ ಬರುತ್ತೇನೆ ಅಲ್ಲಿ ನಾನು ಆಗಲೇ ಹೇಳಿದ ಒಂದು ನಾಯಿ ನನ್ನ headset ಅನ್ನು ಸಂಪೂರ್ಣ ತಿಂದು ಹಾಕಿದೆ .ಎಲಾ ಕಂತ್ರಿ ನಾಯಿ ಅನ್ನ ಹಾಕಿದ ಮನೆಗೆ ಕನ್ನ ಎಂದುಕೊಂಡು 19 ನೇ headset ಹಾಳಾದ ಬೇಸರದಲ್ಲಿ ಮತ್ತೆ ಬಂದು ಕಲ್ಲು ಬೆಂಚಿನ ಮೇಲೆ ಕುಳಿತೆ


.ರಾತ್ರಿಯೆಲ್ಲ ಹೀಗೆ ಕುಳಿತೇ ಇರಬೇಕು ಎಂಬುದು ಅಲ್ಲಿನ ಭೀಕರ ಚಳಿ ನೋಡಿ ನನಗೆ ಗೊತ್ತಾಯಿತು .ರಾಜೇಶ್ ಒಳ್ಳೆ ನಿದ್ರೆ ಹೋಗಿದ್ದ .ಸುಮಾರು 1 .30 ರ ನಂತರ ಒಂದು passenger ರೈಲು ಅಲ್ಲಿ ಉಸಿರು ಎಳೆದುಕೊಳ್ಳುತ್ತಾ ಹೋಯಿತು

.ಹೀಗೆ ಪೂರ್ತಿ ರಾತ್ರಿ ನಾನು ಅಲ್ಲಿ ನಿದ್ದೆ ಇಲ್ಲದೆ ಕಳೆದೆ .ಒಂತಾರ ಗಮ್ಮತ್ ಅನುಭವ.ಬೆಳಿಗ್ಗೆ ಬೆಳಕು ಹರಿದ ಮೇಲೆ ರಾಜೇಶ್ ನನ್ನು ಎಬ್ಭಿಸಿ ಹೊರಡಲು ಹೇಳಿದೆ
.falls ಹತ್ತಿರ ಹೋಗಿ freash ಆಗಿ 6 .30 ಕ್ಕೆ ದೋಣಿಗಾಲ್ ನಿಲ್ದಾಣ ಬಿಟ್ಟೆವು
.ಇಲ್ಲಿನ ಮುಂದಿನ ದಾರಿ ನಿಜಕ್ಕೂ ಸ್ವರ್ಗ ಮಾಯವಾಗಿದೆ .ಈ ದಾರಿ ನನ್ನ ನಿದ್ರೆ ಇಲ್ಲದ ಆಯಾಸವನ್ನು ಸಂಪೂರ್ಣ ಮರೆಯಿಸಿತ್ತು

.ಕಣ್ಮನ ತಣಿಸುವ ಪ್ರಕೃತಿ ,ಬೆಳಗಿನ ಆ ರಮ್ಯ ಮನೋಹರ ವಾತಾವರಣ ,ಅಲ್ಲಲ್ಲಿ ಪ್ರತ್ಯಕ್ಷವಾಗುವ ಕೆಂಪು ಹೊಳೆ ಹಳ್ಳ ,ಅಬ್ಬ ನಿಜಕ್ಕೂ ಅದೊಂದೋ ವರ್ಣನಾತೀತ ಆನಂದ



.ಈ ಮಧ್ಯೆ ನಾವು ಅಲ್ಲೊಂದು ಕಡೆ ಸ್ನಾನ ಮಾಡಲು ನಿರ್ಧರಿಸಿದೆವು ,ಆದರೆ ನಮ್ಮ ಮುಂದೆ ಇನ್ನೂ 18 km ಪ್ರಯಾಣ ಬಾಕಿ ಇತ್ತು .ಅದೂ ಅಲ್ಲದೆ ಅಂದು ಮಧ್ಯಾನ್ಹ ಬೆಂಗಳೂರಿನಿಂದ ಒಂದು passenger ಟ್ರೈನ್ ನಮ್ಮ ಮುಂದಿನ ಸ್ಟೇಷನ್ ಗೆ ಬಂದು ಮಂಗಳೂರಿಗೆ ಹೊರಡುತಿತ್ತು.ನಾವು ಮಧ್ಯಾನ್ಹ ದ ಒಳಗೆ ಆ ಸ್ಟೇಷನ್ ನಲ್ಲಿ ಇರಲೇ ಬೇಕಾಗಿತ್ತು .ರಾಜೇಶ್ ಅಂದು ರಾತ್ರಿಯೇ ಬೆಂಗಳೂರಿಗೆ ಹೊರಡಬೇಕಿತ್ತು ,ನಮಗೆ ಆ passenger ಟ್ರೈನ್ ಮಿಸ್ ಆದರೆ ಬಹಳ ಕಷ್ಟದಲ್ಲಿ ಬೀಳುತ್ತಿದೆವು .ಸೊ ಸ್ನಾನದ plan ಕೈಬಿಟ್ಟು ಮುಂದೆ ನಡೆಯಲು ಶುರು ಮಾಡಿದೆವು

.ನಮ್ಮ ಸವಾಲುಗಳು ಆಗ ಪ್ರಾರಂಭವಾದವು .ಸೇತುವೆಗಳು ಒಂದರ ಹಿಂದೆ ಒಂದು ಬರಲಾರಂಭಿಸಿದವು.ಕೆಳಗಿನ ಪ್ರಪಾತವನ್ನು ನೋಡುತ್ತಾ ,ರೈಲು ಬಾರದಿರಲೆಂದು ದೇವರಲ್ಲಿ ಬೇಡುತ್ತಾ ಒಂದೊಂದೇ ಸೇತುವೆಗಳನ್ನು ದಾಟಿದೆವು

.ಮದ್ಯ ಮದ್ಯ ಅಲಲ್ಲಿ ರೈಲು ಹಳಿ ರಿಪೇರಿ ಮಾಡುವ ಕೆಲಸಗಾರರು ತಮ್ಮ ಪಾಡಿಗೆ ತಾವು ಕೆಲಸ ಮಾಡುತ್ತಿದ್ದರು.ಈ ಮಧ್ಯೆ ನಮಗೆ ಒಂದು ಗೂಡ್ಸ್ ರೈಲು ಎದಿರಾಯ್ತು.ಸದ್ಯ ಆಗ ನಾವು ಸೇತುವೆ ಅಥವಾ ಸುರಂಗದ ಸಮೀಪ ಇರಲಿಲ್ಲ
 .ಪ್ರಕೃತಿಯ ಸೌಂದರ್ಯವನ್ನು ಕಣ್ಣಿನಲ್ಲಿ ತುಂಬಿಕೊಳ್ಳುತ್ತಾ ಹೋಗುತ್ತಿರುವಾಗ ಇದಿರಾಯ್ತು ಒಂದು ಸುರಂಗ.ಇದು ಅಷ್ಟೇನೂ ದೊಡ್ಡದಾಗಿರಲಿಲ್ಲ .ಇದರ ಒಳಗೆ ಒಂದು ಕಡೆ ಬಲ ಭಾಗಕ್ಕೆ open ಇದೆ. ಇಲ್ಲಿ ಹೊರ ಬಂದಾಗ ನಮ್ಮ ಕಣ್ಣಿಗೆ ಕೆಂಪು ಹೊಳೆ ಒಂದು ಕಡೆ ರುದ್ರ ರಮಣೀಯವಾಗಿ ಜಲಪಾತವಾಗಿ ಬಿಳುತ್ತಿರುವುದು ಕಣ್ಣಿಗೆ ಕಂಡಿತು .ಇದನ್ನು ನೋಡಿ ಎಂಜಾಯ್ ಮಾಡಿ ಮುಂದೆ ಹೊರಟೆವು

.ಇದಾದ ನಂತರ ಒಂದರ ಮೇಲೊಂದು ಸುರಂಗಗಳು ನಮಗೆ ಎದುರಾದವು.ಕೆಲವೆಡೆ ಸೇತುವೆ ಮುಗಿದ ನಂತರವೇ ಸುರಂಗ

.ಈ ಸುರಂಗಗಳ ಬಗ್ಗೆ ನಿಮಗೆ ಹೇಳಲೇ ಬೇಕು .ಪ್ರತೀ ಸುರಂಗದ ಭಾಗಿಲಿನಲ್ಲಿ ಅದರ ಒಟ್ಟು ಉದ್ದವನ್ನು ಬರೆದಿರುತ್ತಾರೆ .ಇನ್ನು ಇದರ ಒಳಗೆ ಕಪ್ಪು ಕತ್ತಲು.ಒಳಗಿನ ಗೋಡೆ ಗಳು ನೋಡಲು ಭಯಾನಕವಾಗಿದ್ದು ಎಲ್ಲಿ ಹಾವುಗಳಿರುತ್ತವೆಯೂ ಎನ್ನುವ ಭಯ ಇನ್ನೂ ಅಕ್ಕ ಪಕ್ಕ ನಿಲ್ಲಲು ಕೆಲವು ಸುರಂಗಗಳಲ್ಲಿ ಜಾಗ ಇದ್ದರೆ ಇನ್ನೂ ಕೆಲವಲ್ಲಿ ಇಲ್ಲ .ಕೆಲವು ಅರ್ಧ ಕಿಲೂಮೀಟರ್ ನಿಂದ 1 ಕಿಲೂಮೀಟರ್ ನಷ್ಟು ಇರುತ್ತವೆ .ಇಲ್ಲಿ ಬೆಳಕಿಲ್ಲದೆ ನಡೆಯುವುದು ಬಹಳ ಕಷ್ಟ

.ನಾವು ಇಂತಹ ಸುರಂಗಗಳಲ್ಲಿ ಕೇವಲ ಮೊಬೈಲ್ ಬೆಳಕಿನಲ್ಲಿ ಜೀವ ಭಯದಿಂದ ನಡೆದಿದ್ದೇವೆ .ಆ ಕತ್ತಲಲ್ಲಿ ನಡೆಯುತ್ತಿರಬೇಕಾದರೆ ನಿಜವಾಗಿಯೂ ಅದೊಂದು ಭಯಂಕರ ಅನುಭವ .ಅದೂ ಅಲ್ಲದೇ ಅಲ್ಲಿ ಅಕಸ್ಮಾತ್ ರೈಲು ಬಂದರೆ ನಮ್ಮ ಗತಿ ಪಿಕ್ಚರ್ .ಕೆಲವೆಡೆ ಅಕ್ಕ ಪಕ್ಕ ನಿಲ್ಲಬಹುದಾದರು ಗೂಡ್ಸ್ ರೈಲುಗಳ ಧೂಳು ಹಾಗು ಶಬ್ದಕ್ಕೆ ಕತೆ ಏನಾಗುತ್ತದೋ ಹೇಳತೀರದು

.ಅಂತೂ ಹಲವು ಸುರಂಗಗಳಲ್ಲಿ ಕ್ರಮಿಸಿದ ನಂತರ ಒಂದು ಸುಂದರ ಸ್ಥಳದಲ್ಲಿ ಬ್ರೇಕ್ ತೆಗೆದುಕೊಂಡೆವು .ರಾಜೇಶ್ ಹಣ್ಣು ಹಂಪಲು ಕೊಟ್ಟನು .ನನಗೆ ರಾತ್ರಿ ನಿದ್ದೆ ಬಿಟ್ಟಿದ್ದರ ಪರಿಣಾಮ ಯಾಕೊ ಹಸಿವು ಆಗುತ್ತಿರಲಿಲ್ಲ

.ನಡೆಯುತ್ತಾ ಹಲವಾರು ಘಟನೆಗಳನ್ನು ನೋಡಿದೆವು .ಒಂದೆಡೆ ಆನೆ ಲದ್ದಿ ,ಆಗಷ್ಟೆ ಹಳಿ ದಾಟಲು ಹೋಗಿ ರೈಲಿನ ಚಕ್ರಕ್ಕೆ ಸಿಕ್ಕಿ ಸತ್ತ ಹಾವು,ಇನ್ನೊಂದೆರಡು ಚಿಕ್ಕ ಚಿಕ್ಕ ಹಾವಿನ ಜಾತಿಯ ಪ್ರಾಣಿಗಳು ಹೀಗೆ ನೋಡುತ್ತಾ ನಡೆದೂ ನಡೆದೂ ಅರ್ಧ ದಾರಿ ಕ್ರಮಿಸಿದೆವು


.ಬಿಸಿಲು ಹೆಚ್ಚಾಗ ತೊಡಗಿತು,ಪ್ರಯಾಣ ದುಸ್ತರವಾಗಲಾರಂಭಿಸಿತು.ನಡೆ ನಿಧಾನವಾಯ್ತು .ಘಂಟೆ ಸದ್ದಿಲದೆ ಸರಿಯುತ್ತಿತ್ತು.ಆಗಲೇ 11 ಘಂಟೆ ಆಗಿ ಹೋಗಿತ್ತು .ನಾವು ಬೇಗ ಬೇಗ ನಡೆಯಬೇಕಿತ್ತು ಉಳಿದ 2 ಘಂಟೆಯಲ್ಲಿ ನಾವು ಯಡಕುಮರಿ ಸ್ಟೇಷನ್ ತಲುಪಬೇಕಿತ್ತು

.ಹೀಗೆ ನಡೆಯುತ್ತಿರಬೇಕಾದರೆ ಸುಮಾರು 11 .40 ರ ಹೊತ್ತಿಗೆ ಒಂದು 410 ಮೀಟರ್ ಉದ್ದದ ಒಂದು ಸುರಂಗ ಎದುರಾಯ್ತು

.ಇದರ ಎದುರಲ್ಲಿ ಒಂದು ಸಿಗ್ನಲ್ ಲೈಟ್ ಇತ್ತು .ಇದು ಹಸಿರು ದೀಪ ತೋರಿಸುತಿತ್ತು .ಆದ್ದರಿಂದ ನಾವು ಇದನ್ನು ದಾಟಲು ಮುಂದಾದೆವು

.ಈ ಸುರಂಗದ ಒಳಗೆ ಅಕ್ಕ ಪಕ್ಕ ನಿಲ್ಲಲು ಜಾಗ ಇರಲಿಲ್ಲ .ಇದ್ದ ಒಂದು ಚಿಕ್ಕ ಜಾಗದಲ್ಲಿ ಪೂರ್ತಿ ನೀರು ತುಂಬಿಕೊಂಡು ಕೆಸರಾಗಿತ್ತು .ನಾವು ಇದರ ಒಳಗೆ ಸ್ವಲ್ಪ ದೂರ ನಡೆದಿದ್ದೆವು.ಇದ್ದಕ್ಕಿದಂತೆ ಎದುರಿನ ಕತ್ತಲ ಆಚೆಯಿಂದ ರೈಲು ಬರುವ ಸದ್ದಾಯಿತು .ನಮ್ಮ ಜೀವ ಬಾಯಿಗೆ ಬಂದಿತ್ತು .ತಕ್ಷಣ ಬಂದ ದಾರಿಯಲ್ಲೇ ಹಿಂತಿರುಗಿ ಓಡಲು ಶುರು ಮಾಡಿದೆವು.ಸದ್ದು ಹತ್ತಿರಾಗುತ್ತಲೇ ಇತ್ತು .ಮುಗ್ಗರಿಸಿ ಓಡಿ ಅಂತೂ ಇಂತೂ ಸುರಂಗದ ಬಾಯಿಗೆ ಬಂದು ನಾನು ಎಡ ಭಾಗದಲ್ಲಿದ್ದ ಚಿಕ್ಕ ಜಾಗಕ್ಕೆ ನೆಗೆದೆ .ಅಲ್ಲಿ ಕೆಸರಿದೆ ಎಂದು ನನಗೆ ಗೊತ್ತಿರಲಿಲ್ಲ .ನನ್ನ ಕಾಲು ಅರ್ಧ ಭಾಗ ಅಲ್ಲಿ ಹೂತು ಹೋಯಿತು .ರಾಜೇಶ್ ಬಲ ಭಾಗಕ್ಕೆ jump ಮಾಡಿ ಸೇಫ್ ಆದ.ನಾವು ಹೊರ ಬಂದ ಕೆಲವೇ ಸೆಕೆಂಡ್ ಗಳಲ್ಲಿ ಕಿವಿಗೆ ಕೇಳುತ್ತಿದ್ದ ಸದ್ದು ಮಾಡುತಿದ್ದ ವಸ್ತು ಕಣ್ಣಿಗೆ ಕಂಡಿತು .ಅದೊಂದು ಚಿಕ್ಕ traly 4 ,5 ಜನರನ್ನು ಕೂರಿಸಿಕೊಂಡು ಶರವೇಗದಲ್ಲಿ ಸಾಗುತಿತ್ತು

.ಮುಂದಿನ 10 ನಿಮಿಷಗಳು ಆ traly ಗೆ ಶಪಿಸುತ್ತಾ ನಾನು ಅಲ್ಲೇ ಇದ್ದ ಚಿಕ್ಕ ತೊರೆಯಲ್ಲಿ ಕಾಲು ತೊಳೆದುಕೊಂಡೆ .ಇನ್ನೇನು ಮತ್ತೆ ಸುರಂಗ ದಾಟಬೇಕು ಎನ್ನುವಷ್ಟರಲ್ಲಿ ಅಲ್ಲಿದ ಸಿಗ್ನಲ್ ದೀಪ ಕೆಂಪು ಬಣ್ಣಕ್ಕೆ ತಿರುಗಿತು

.ರೈಲು ಬರುತ್ತಿದೆ ಎಂದು ನಮಗೆ ಗೊತ್ತಾಯಿತು.ಅಲ್ಲೇ 10 ನಿಮಿಷ ಕೂತೆವು ಅಷ್ಟರಲ್ಲೇ ದೂರದಲ್ಲಿ ರೈಲು ಕೂಗುವ ಸದ್ದು ಕೇಳಿತು.ಅದೊಂದು ಬಾರಿ ದೊಡ್ಡದಾದ ಗೂಡ್ಸ್ ರೈಲು .ಸುತ್ತ ಮುತ್ತ ಧೂಳು ಹಾರಿಸುತ್ತ ಬರುತಿತ್ತು

.ಅದು ಹೋದ ನಂತರ ಸುರಂಗದ ಒಳಗೆ ಹೋದೆವು .ಅಲ್ಲಿ ಇನ್ನೂ ಧೂಳಿತ್ತು.ಅಂತೂ ಆ ಸುರಂಗವನ್ನು ದಾಟಿ ಹೊರ ಬಂದೆವು

.ಅಷ್ಟರಲ್ಲಿ ನನ್ನ ಬೆಳಕಿನ ಒಂದೇ ಮಾರ್ಗ ನನ್ನ ಮೊಬೈಲ್ ಬ್ಯಾಟರಿ ಲೋ ಆಗಿತ್ತು .ನಾವಿನ್ನು 1 ಘಂಟೆ ಪ್ರಯಾಣ ಮಾಡಬೇಕಿತ್ತು .ಸೊ ರಾಜೇಶ್ ಮೊಬೈಲ್ ಬ್ಯಾಟರಿ ತೆಗೆದು ನನಗೆ ಹಾಕಿಕೊಂಡು ಮುಂದೆ ಚಲಿಸಿದೆವು

.ಅಂತೂ 12 .30 ರ ಹೊತ್ತಿಗೆ ಕೊನೆಯ ಧೀರ್ಘವಾದ ಸುರಂಗವನ್ನು ಪ್ರವೇಶಿಸಿದೆವು .ಇಲ್ಲಿ ಕೆಲಸಗಾರರು ಕೆಲಸ ಮಾಡುತ್ತಿದ್ದರಿಂದ ಹೆಚ್ಚು ಬಯವಿಲ್ಲದೆ ಇದನ್ನು ದಾಟಿದೆವು

.
ಸುರಂಗದ ಒಳಗೆ ಒಂದು ಕಡೆ ಗೋಡೆಯಿಂದ ಕೆಂಪನೆಯ ನೀರು ಬೀಳುತ್ತಿತ್ತು .ಇದು ನಮ್ಮಲ್ಲಿ ಆಶ್ಚರ್ಯವನ್ನುಂಟು ಮಾಡಿತು.ಬಹುಷಃ ಇದು ಕಾಡಿನ ಯಾವುದೂ ಅಂಶ ಮಿಕ್ಸ್ ಆಗಿ ಹಿಗಾಗಿದ್ದಿರಬಹುದು
.ಅಂತಿಮವಾಗಿ 1 .೦೦ ಘಂಟೆಯ ಸಮಯಕ್ಕೆ ನಮ್ಮ ಪ್ರಯಾಣದ ಕೊನೆಯ ಹಂತ ತಲುಪಿದೆವು .ಯಡಕುಮರಿ ನಿಲ್ದಾಣಕ್ಕೆ ಬಂದಾಗ ನಾವು ಸಾಕಷ್ಟು ಆಯಾಸಗೊಂಡ್ಡಿದ್ದೆವು .ಅಲ್ಲೇ ಇದ್ದ ನೀರಿನ ಸೆಲೆಯಲ್ಲಿ freash ಆಗಿ ದೂರದಲ್ಲಿ ಕಾಣುತ್ತಿದ್ದ ಬಿಸಿಲೆ ಗುಡ್ಡಗಳನ್ನು ನೋಡುತ್ತಾ ಆಯಾಸವನ್ನು ನೀಗಿಸಿಕೊಂಡೆವು
.ಯಡಕುಮರಿ ಕೂಡ ಒಂದು ಚಿಕ್ಕ ನಿಲ್ದಾಣ.ಅಲ್ಲಿ ಇನ್ನು ಕೆಲವೇ ಹೊತ್ತಿನಲ್ಲಿ passenger ರೈಲು ಬರುವುದಿತ್ತು .ಅದಕ್ಕೆ ಟಿಕೆಟ್ ಕೇಳಿದಾಗ ಅಲ್ಲಿ ಟಿಕೆಟ್ ಲಭ್ಯವಿಲ್ಲ ಎಂದರು

.ಆದದ್ದಾಗಲಿ ಎಂದು 2 .30 ಘಂಟೆಗೆ ಬಂದ passenger ರೈಲು ಹತ್ತಿದೆವು .ಈ ಯಡಕುಮರಿ ನಿಲ್ದಾಣದ ನಂತರದ ನಿಲ್ದಾಣವೇ ಶಿರಿಬಾಗಿಲು .ಈ ಎರಡು ನಿಲ್ದಾಣಗಳ ನಡುವಿನ ಆ 10 ,12 ಕಿಲೂಮೀಟರ್ ನಿಜವಾಗಿಯೂ ಬಹಳಾ ಕಷ್ಟಕರವಾಗಿರುವುದು ರೈಲಿನಲ್ಲಿ ಚಲಿಸುತಿದ್ದ ನಮ್ಮ ಗಮನಕ್ಕೆ ಬಂತು .ಕಿಲೂಮೀಟರ್ ಗಟ್ಟಲೆ ಸುರಂಗಗಳು,ಸೇತುವೆಗಳು ಈ ದಾರಿಯಲ್ಲಿ ಬಹಳಷ್ಟು ಇದ್ದವು .ಒಂದರ ಹಿಂದೆ ಒಂದು ಸರಣಿಯಲ್ಲಿ ಬರೀ ಸುರಂಗ ಸೇತುವೆಗಳೇ ಇಲ್ಲಿ ತುಂಬಿಕೊಂಡಿದ್ದವು ಅದರ ಮಧ್ಯೆ ಪ್ರಕೃತಿಯೂ ಅಷ್ಟೆ ರುದ್ರ ರಮಣೀಯವಾಗಿ ಹಬ್ಬಿತ್ತು

.ಶಿರಿಬಾಗಿಲಿನ ನಂತರ ಸುಬ್ರಮಣ್ಯ ದ ವರೆಗೆ ದಾರಿ ಅಷ್ಟೇನೂ ಕಷ್ಟಕರವಾಗಿಲ್ಲ

.
4 ಘಂಟೆಗೆ ಸುಬ್ರಮಣ್ಯ railway ನಿಲ್ದಾಣ ತಲುಪಿದೆವು .ನಮ್ಮ ಅದೃಷ್ಟಕ್ಕೆ ನಾವು ರೈಲು ಇಳಿದ ತಕ್ಷಣ tc ನಮ್ಮ ಭೋಗಿಗೆ ಹತ್ತಿದರು .ಅವರೆಲ್ಲಾದರೂ ಹಿಂದಿನ ನಿಲ್ದಾಣದಲ್ಲಿ ಹತ್ತಿದ್ದರೆ ನಮ್ಮ ಜೇಭಿಗೆ ಕತ್ತರಿ ಬೀಳುತ್ತಿತ್ತು

.ಈ ರೈಲ್ವೆ ನಿಲ್ದಾಣ ಸುಬ್ರಮಣ್ಯ ಸಿಟಿ ಇಂದ 8 ರಿಂದ 10 km ಧೂರದಲ್ಲಿದೆ .ಹಾಗಾಗಿ ಅಲ್ಲಿ ಒಂದು ಕಿಕ್ಕಿರಿದು ತುಂಬಿದ ಒಂದು ಜೀಪಿನ ಮುಖಾಂತರ ಸುಬ್ರಮಣ್ಯಕ್ಕೆ ಬಂದು ಅಲ್ಲಿ room ಬುಕ್ ಮಾಡಿ ಸಂಜೆ ದೇವಾಲಯಕ್ಕೆ ತೆರಳಿ ದರ್ಶನ ಪಡೆದು ಊಟ ಮಾಡಿದೆವು

.ನಾವು ಸರಿಯಾಗಿ ಊಟ ಮಾಡದೆ ಒಂದು ದಿನಗಳೇ ಕಳೆದಿದ್ದವು ಹಾಗಾಗಿ ಸುಬ್ರಮಣ್ಯ ದೇವಸ್ಥಾನದಲ್ಲಿ ಭರ್ಜರಿ ಊಟ ಮಾಡಿದೆವು .ಆ ರುಚಿ ಭರಿತ ಊಟವನ್ನು ನಾನು ಇಂದಿಗೂ ಮರೆತಿಲ್ಲ

.ರಾತ್ರಿ 10 ಕ್ಕೆ ನಾವು ಸುಬ್ರಮಣ್ಯ ದ ksrtc ಬಸ್ stand ಗೆ ಬಂದೆವು .ರಾಜೇಶ್ ಬೆಂಗಳೂರು ಬಸ್ ಹತ್ತಿದನು ,ನಾನು ಹಾಸನ್ ಬಸ್ ಹತ್ತಿದೆ

.ನಾನು ಕಳೆದ 40 ಘಂಟೆಯಲ್ಲಿ ಕೇವಲ ಅರ್ಧ ಘಂಟೆ ನಿದ್ರೆ ಮಾಡಿದ್ದೆ .ಹಾಗಾಗಿ ಬಸ್ ಹತ್ತಿದ ಕೂಡಲೇ ಪ್ರಪಂಚ ಮರೆವ ಹಾಗೆ ನಿದ್ರೆ ಬಂತು .ಮಧ್ಯ ಮಧ್ಯ ಬಸ್ ಹೊಂಡ ಗುಂಡಿಯಲ್ಲಿ ಹೋದಾಗ ಅರೆ ಪ್ರಜ್ಞೆಯಲ್ಲಿ ಎಚ್ಚರವಾಗುತ್ತಿತ್ತು .ಆಗ ತಿರುವು ಮುರುವು ಚಾರ್ಮಾಡಿ ಘಾಟ್ ಚಂದ್ರನ ಬೆಳಕಿನಲ್ಲಿ ಮಂದವಾಗಿ ಕಾಣುತ್ತಿತ್ತು

.ರಾತ್ರಿ 1 .30 ಕ್ಕೆ ಹಾಸನ್ ಬಸ್ ಸ್ಟಾಪ್ ನಲ್ಲಿ ಇಳಿದ ನಾನು 2 .30 ಘಂಟೆಗೆ ಬಂದ ಶೃಂಗೇರಿ ಬಸ್ ಹತ್ತಿ ಮನೆ ಕಡೆ ಪ್ರಯಾಣ ಬೆಳೆಸಿದೆ

.ಹೀಗೆ ಮರೆಯಲಾಗದ ಒಂದು ಅದ್ಭುತ journey end ಆಗಿತ್ತು .ಇದಾದ ಹಲವು ದಿನಗಳ ನಂತರವೂ rajesha ನ ಕನಸಿನಲ್ಲಿ ಜಲ್ಲಿ ಕಲ್ಲು ಗಳು ಕಾಣುತ್ತಿದ್ದವಂತೆ

.ಹೀಗೆ ನಾನು,ರಾಜೇಶ್ ಮತ್ತೆ ಇತ್ತೀಚಿಗೆ ಇನ್ನೊಂದು ಸಣ್ಣ ಹುಚ್ಚು ಪ್ರಯಾಣ ಹೋಗಿದ್ದೆವು .ಅದರ ವಿವರಗಳನ್ನು ನಂತರದ ದಿನಗಳಲ್ಲಿ ತಿಳಿಸುತ್ತೇನೆ
.ಹಸಿರು ಹಾದಿ ನಿಜವಾಗಿಯೂ ಪ್ರಕೃತಿ ಪ್ರೇಮಿಗಳಿಗೆ ಸ್ವರ್ಗ ,ಅಲ್ಲಿ ಪ್ರವಾಸ ಮಾಡುವುದೇ ಒಂದು ಅದ್ಭುತ ಅನುಭವ .ನಾವು ಇನ್ನು ನಡೆಯದೆ ಬಿಟ್ಟ ಉಳಿದ ಸುಮಾರು 15 km ಅನ್ನು ಮತ್ತೆ ಸದ್ಯದಲ್ಲೇ ಕ್ರಮಿಸಬೇಕೆಂದು ಅಂದುಕೊಂಡಿದ್ದೇವೆ

.ಒಟ್ಟಿನಲ್ಲಿ ಸುಂದರ ಪ್ರಕೃತಿಯ ಭಯಾನಕ ಹಾದಿಯಲ್ಲಿ ಉಂಡಾಡಿ ಗುಂಡರಂತೆ ಪ್ರವಾಸ ಹೋದ ಈ ತರದ ಅನುಭವವನ್ನೇ ನಾನು
-ಹಸಿರು ಹಾದಿಯಲ್ಲಿ ಹುಚ್ಚು ಪ್ರಯಾಣ- ಎಂದದ್ದು

.ಹಸಿರು ಹಾದಿಯ ಕೆಲವು ಸುಂದರ ಇಮೇಜ್ ಗಳು


ಸೇತುವೆ ಮೇಲೆ ರೈಲು ಬಂದರೆ ನಿಲ್ಲಲು ಇರುವ ಜಾಗ

ರಾಜೇಶ್
ನಾನು




 .ಇದು ನನ್ನ ಬ್ಲಾಗಿನ ಮೊದಲ ಅತ್ಯಂತ ಧೀರ್ಘವಾದ ಪೋಸ್ಟ್ .ನಿಮಗೆ ಕಷ್ಟವಾದರೂ ಇಷ್ಟವಾಯಿತು ಎಂದುಕೊಂಡಿದ್ದೇನೆ.ನಿಮ್ಮ ಅಭಿಪ್ರಾಯ ತಿಳಿಸಿ......


-SAVE NATURE-

Comments

  1. ಉತ್ತಮ ಮಾಹಿತಿಪೂರ್ಣ ಬರಹ. ಕೆಲವರು ರಾತ್ರಿ ಚಳಿಗೆ ಒಳ ಸ್ವೆಟರ್ (ಎಣ್ಣೆ) ಹಾಕುತ್ತಾರಂತೆ!!!( ತಾವು ತೆಗೆದುಕೊಂಡುಹೋಗಿರಲಿಲ್ಲವೆಂದು ನಂಬುತ್ತೇನೆ.)

    ReplyDelete
  2. ಹ ಹ ...ಅಂತ ಒಳ್ಳೆ ಅಭ್ಯಾಸ ಇಲ್ಲ ಸರ್....Very nice comment ಧನ್ಯವಾದಗಳು

    ReplyDelete
  3. ಸಕಲೇಶಪುರ ದಿಂದ ಸುಬ್ರಹ್ಮಣ್ಯ ದವರೆಗಿನ ನಿಮ್ಮ ಚಾರಣದ ಅನುಭವ ಚೆನ್ನಾಗಿದೆ.ಚಿತ್ರಗಳು ಲೇಖನಕ್ಕೆ ಮೆರುಗುನೀಡಿವೆ.ನಿಮ್ಮ ಲೇಖನ ಬೇರೆಯವರು ಈ ತರಹ ಚಾರಣ ಕೈಗೊಂಡಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗರೂಕತೆ ಕ್ರಮದ ಬಗ್ಗೆ ತಿಳಿಸಿದ್ದು ಸರಿಯಾಗಿದೆ. ಒಳ್ಳೆಯ ಲೇಖನ ಚೆನ್ನಾಗಿದೆ.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  4. ನಿಮ್ಮ ಅಭಿಪ್ರಾಯಕ್ಕಾಗಿ ಧನ್ಯವಾದಗಳು ....

    ReplyDelete
  5. waav... super narrating & beautiful nature snaps.. keep posting like these articles... Thank U.........

    ReplyDelete
  6. ನಿಮ್ಮ ಚಾರಣ ಕಥನ ತುಂಬಾ ಸೊಗಸಾಗಿದೆ.

    ReplyDelete
  7. ಧನ್ಯವಾದಗಳು ಮೋಹನ್ ಸರ್....

    ReplyDelete
  8. ಅದ್ಭುತವಾದ ಅನುಭವ.. ಲೇಖನ ಚೆನ್ನಾಗಿ ಮೂಡಿಬಂದಿದೆ... KEEP WRITING..

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....