Posts

Image
-ಮರವೆಂಬ ವರ- .ಸಮಾನ್ಯವಾಗಿ ನಮಗೆ ಮರದ ಉಪಯೋಗಗಳ ಬಗ್ಗೆ ಹೆಚ್ಚಿನ ವಿಷಯ ತಿಳಿದಿರುವುದಿಲ್ಲ .ಸಾಮಾನ್ಯವಾಗಿ ಮರಗಳ ಉಪಯೋಗ ಏನೆಂದು ಕೇಳಿದರೆ ನಾವು ಹೇಳುವುದು ಉಸಿರಾಡಲು,ಮಳೆ ಬರಿಸಲು,ಮನೆ ಕಟ್ಟಲು ಎಂದು .ಇವೆಲ್ಲವುದರ ಜೊತೆ ಮರವೆಂಬ ವರದ ಬಗೆಗಿನ ಇನ್ನೂ ಇಂಟರೆಸ್ಟಿಂಗ್ facts ಗಳು ಈ ಪೋಸ್ಟ್ ನಲ್ಲಿ *ಒಂದು ಮರ ವರ್ಷವೊಂದಕ್ಕೆ ಸರಿಸುಮಾರು 260 ಪೌಂಡ್ ಆಮ್ಲಜನಕವನ್ನು ಉತ್ಪತ್ತಿ ಮಾಡುತ್ತದೆ.ಅಂದರೆ ವರ್ಷವೊಂದಕ್ಕೆ 2 ಮರಗಳು 4 ಜನರ ಒಂದು ಕುಟುಂಬಕ್ಕೆ ಬೇಕಾದ ಆಮ್ಲಜನಕವನ್ನು ಪೂರೈಕೆ ಮಾಡುತ್ತದೆ *ಒಂದು ಕಾರನ್ನು 26 ,೦೦೦ ಮೈಲಿ ಓಡಿಸಿದಾಗ ಉತ್ಪತ್ತಿಯಾಗುವ ಇಂಗಾಲದ ಡೈ ಆಕ್ಸೈಡ್ ಅನ್ನು ಒಂದು ಮರ ಕೇವಲ ಒಂದು ವರ್ಷದಲ್ಲಿ ಹೀರಿಕೊಳ್ಳಬಲ್ಲದು *ಒಂದು ಮರ ತನ್ನ ಜೀವಿತಾವದಿಯಲ್ಲಿ ಸರಾಸರಿ ಒಂದು ಟನ್ ನಷ್ಟು ಇಂಗಾಲದ ಡೈ ಆಕ್ಸೈಡ್ ಅನ್ನು ವಾತಾವರಣದಿಂದ ಹೀರಿಕೊಳ್ಳುತ್ತದೆ *ಮರಗಳು ಶಬ್ದ ಮಾಲಿನ್ಯವನ್ನು ತಡೆಯುವ ಶಬ್ದ ನಿಯಂತ್ರಕಗಳಂತೆ ಕೆಲಸ ಮಾಡುತ್ತವೆ *ಮಣ್ಣು ಸವೆತವನ್ನು ತಡೆಯುವಲ್ಲಿ ಮರಗಳ ಭೇರಿನ ಪಾತ್ರ ತುಂಬಾ ಪ್ರಮುಖವಾದದ್ದು *70 ರ ವಯಸ್ಸಿನ ಒಂದು ಮರ ಸತ್ತರೆ ಸುಮಾರು 3 ಟನ್ ನಷ್ಟು ಇಂಗಾಲದ ಡೈ ಆಕ್ಸೈಡ್ ಅದರಿಂದ ವಾತಾವರಣಕ್ಕೆ ಸೇರುತ್ತದೆ *ಭೂಮಿಯ ಮೇಲೆ ಅತ್ಯಂತ ಸುಧೀರ್ಘವಾಗಿ ಬದುಕುವ ಜೀವಿ 'ಮರ' *ಗಾಳಿಯಲ್ಲಿನ ಉಷ್ಣತೆಯನ್ನು ಮರಗಳು ಕಡಿಮೆ ಮಾಡಿ ಪರಿಸರವನ್ನು ತಂಪಾಗಿಡುತ್ತವೆ *ಮರದ ಕಾಂಡದಲ್ಲಿನ 'ರಿ...
Image
- ಮಳೆಯ ಮಾಯೆ-   Courtesy- public-domain-image.com Courtesy- Photos8.com   -ಪ್ರಕೃತಿಯನ್ನು ಉಳಿಸಿ-
Image
-ಡೆಡ್ಲಿ ಬೈಟ್- .ಕಿಂಗ್ ಕೋಬ್ರ is back ಇನ್ action .ಈ ಬಾರಿ ನಮ್ಮ ಕಿಂಗ್ ನ ಭೇಟೆ ಒಂದು ಉಡ (Monitor Lizard) .ಕಿಂಗ್ ನ ಡೆಡ್ಲಿ ಬೈಟ್ ನ ಡೆಡ್ಲಿ ಇಮೇಜ್ n ಸ್ಟೋರಿ ಈ ಪೋಸ್ಟ್ ನಲ್ಲಿ .ಒಂದು ದಿನ ನಾನು ಸಂಜೆ  ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರಬೇಕಾದರೆ ನನಗೊಂದು ಕರೆ ಬಂತು.ಕರೆ ಮಾಡಿದ ನನ್ನ ಸ್ನೇಹಿತ ಕಿಂಗ್ (ಕಿಂಗ್ ಕೊಬ್ರ) visit ಬಗ್ಗೆ ಮಾಹಿತಿ ನೀಡಿದ .ತಕ್ಷಣ ನಾನು ಸಾಧ್ಯವಾದಷ್ಟು ಬೇಗ ಕಿಂಗ್ ಬಂದ ಸ್ಥಳದಲ್ಲಿದ್ದೆ.ಈ ಬಾರಿ ನನ್ನ ಕುತೂಹಲ ಇಮ್ಮಡಿಯಾಗಲು ಕಾರಣ ಕಿಂಗ್ ಈ ಬಾರಿ ಒಂದು ಮಧ್ಯಮ ವಯಸ್ಸಿನ ಉಡದ ಮೇಲೆ attack ಮಾಡಿದ್ದ .ನಾನು ಸ್ಥಳ ತಲುಪುವುದರಲ್ಲಿ ಕಿಂಗ್  ಜನರ ಗಲಾಟೆಯಿಂದ ತನ್ನ ಊಟವನ್ನು ಅರ್ಧ ಜೀವ ಮಾಡಿ ಹೊರಟು ಹೋಗಿದ್ದ  .ಉಡ ಬಿದ್ದ ಜಾಗದಲ್ಲೇ ಅರ್ಧ ಜೀವವಾಗಿ ಬಿದ್ದಿತ್ತು .ಕಿಂಗ್ ತನ್ನ ಊಟಕ್ಕೆ ಮತ್ತೆ ಹಿಂತಿರುಗುವ ಸಾಧ್ಯತೆ ಕಡಿಮೆ ಇತ್ತು.ಆದರೂ ನಾನು ಮತ್ತು ನನ್ನ ಕೆಲವು ಸ್ನೇಹಿತರು ಸ್ವಲ್ಪ ಹೊತ್ತು ಅಲ್ಲಿ ಶಬ್ದ ಮಾಡದೆ ಕಿಂಗ್ ಗಾಗಿ ಕಾದು ಕುಳಿತೆವು .ಸೂರ್ಯ ಮುಳುಗುವ ಸಮಯವಾಗುತಿತ್ತು.ಇನ್ನು ಕಿಂಗ್ ಬರುವುದಿಲ್ಲ ಎಂದುಕೊಂಡು ನಾವು ದಿನೇಶಣ್ಣರನ್ನು  ಭೇಟಿಯಾಗಲು ಹೊರಟೆವು .ನಾವು ಹೊರಟು ಹೋದ ಬಳಿಕ ಆ ಜಾಗದಲ್ಲಿ ಒಬ್ಬರು ಹಿರಿಯರು ಕುಳಿತು ಹಾವು ಬರುತ್ತದೆಯೇ ಎಂದು ನೋಡುತ್ತಿದ್ದರು .ಇದಾದ ಅರ್ಧ ಗಂಟೆ ಬಳಿಕ ಮತ್ತೆ ನಮಗೆ ಕರೆ ಬಂತು ಕಿಂಗ್ ಮತ್ತೆ ಬಂದಿದೆ ಎಂದು...
-ಟಾರ್ಗೆಟ್ ಪ್ರಕೃತಿ- -ಮೈಸೂರಿನಲ್ಲಿ ಕಾಡಾನೆಗಳ ದಾಂಧಲೆ- -ಖಾಸಗಿ ಲಾಬಿಗೆ ಬಲಿಯಾಗುತ್ತಿದೆ ಹುಲಿ ಸಂರಕ್ಷಿತ ಪ್ರದೇಶ- - ಬಂಡೀ ಪುರ ಅಭಯಾರಣ್ಯದಲ್ಲಿ ತಲೆಯೆತ್ತಲಿವೆ 10 ರೆಸಾರ್ಟ್ ಗಳು- -ಪಶ್ಚಿಮ ಘಟ್ಟದ 10 ಪ್ರದೇಶಗಳನ್ನು ಯುನೆಸ್ಕೋ ಪಟ್ಟಿಗೆ ಸೇರಿಸದಿರಲು ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಮನವಿ- ಇಂತಹ ಹತ್ತು ಹಲವು ಹೆಡ್ ಲೈನ್ ಗಳನ್ನು ಇತ್ತೀಚಿನ ಕನ್ನಡ ಪತ್ರಿಕೆಗಳಲ್ಲಿ ನೀವು ನೋಡಿರಬಹುದು .ಪ್ರಕೃತಿಯ ಮೇಲೆ ನಮ್ಮನಾಳುವ ದೊರೆಗಳಿಗೆ ಕಾಳಜಿ ಎಷ್ಟು ಎಂದು ಇದರಿಂದ ಸ್ಪಷ್ಟವಾಗಿ ಅರ್ಥವಾಗುತ್ತದೆ .ನಾನು ಇಲ್ಲಿ ಯಾವುದೇ ಒಂದು ಸರ್ಕಾರವನ್ನು  ಟಾರ್ಗೆಟ್ ಮಾಡಿ ಮಾತನಾಡುತ್ತಿಲ್ಲ.ಪ್ರಕೃತಿ ಮೇಲೆ ಹಲ್ಲೆ ಮಾಡುವ ಯಾರಾದರೂ ಸರಿ ಅವರ ವಿರುದ್ದ ದನಿ ಎತ್ತಬೇಕಾಗುವುದು ಪ್ರಕೃತಿಯಿಂದ ಬದುಕುವ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ . ಇತ್ತೀಚಿಗೆ ನಾನು ರಾಜ್ಯದ ಪ್ರತಿಷ್ಟಿತ ಅಭಯಾರಣ್ಯಕ್ಕೆ ಭೇಟಿ ನೀಡಿದ್ದೆ .ವನ್ಯ ಪ್ರಾಣಿಗಳನ್ನು ಉಳಿಸಿಕೊಳ್ಳಲು ಅಲ್ಲಿನ ವ್ಯವಸ್ಥೆ, ಸಫಾರಿ ಗಳ ಅಬ್ಬರ,ರೆಸಾರ್ಟ್ ಗಳ ಲೋಕ.ನಿಜವಾಗಿಯೂ ಹೇಳಬೇಕೆಂದರೆ ನಾನು ಅಭಯಾರಣ್ಯ ದಲ್ಲಿ ಇದ್ದೇನೆಯೇ ಎಂಬ ಅನುಮಾನ ಬಂದಿತ್ತು .ಪ್ರವಾಸೋದ್ಯಮದ ಹೆಸರಿನಲ್ಲಿ ವನ್ಯ ಜೀವಿಗಳು ಅನುಭವಿಸುತ್ತಿರುವ ತೊಂದರೆಗಳು ಯಾರಿಗೂ ತಿಳಿಯುತ್ತಿಲ್ಲ .ಅಭಯಾರಣ್ಯಗಳು,ರಕ್ಷಿತಾರಣ್ಯಗಳು ಇಂದು ದುಡ್ಡಿದ್ದವರ ತೆವಲು ತೀರಿಸಿಕೊಳ್ಳುವ ಪ್ರದೇಶಗಳಾಗಿರುವುದು ನಿಜಕ್ಕೂ ದುರಾದೃಷ್ಟಕರ ...
Image
-Tarangire ನ್ಯಾಷನಲ್ ಪಾರ್ಕ್- .Tarangire ನ್ಯಾಷನಲ್ ಪಾರ್ಕ್ Tanzania ದ ಆರನೇ ಅತೀ ದೊಡ್ಡ ನ್ಯಾಷನಲ್ ಪಾರ್ಕ್ .ನನ್ನ ಫ್ರೆಂಡ್ ಒಬ್ಬರು ಇಲ್ಲಿ ತೆಗೆದ ಕೆಲವು ಆನೆ ಹಾಗು ಸಿಂಹಗಳ ಸುಂದರ ಚಿತ್ರಗಳು ಈ ಪೋಸ್ಟ್ ನಲ್ಲಿ .Image Courtesy - Maggy Meyer,Germany -SAVE NATURE-

-ವಿಶ್ವ ಪರಿಸರ ದಿನ-

Image
.ಮತ್ತೆ ಬಂದಿದೆ ಪ್ರಕೃತಿ ಪ್ರಿಯರ ದಿನ ದಿನ...ಅದೇ ವಿಶ್ವ ಪರಿಸರ ದಿನ .ನನಗೆ ಕೆಲವರು ಕರೆ ಮಾಡಿ ಪ್ರಕೃತಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಪ್ರಕೃತಿಯ slogans ಗಳನ್ನು ನಿಮ್ಮ ಬ್ಲಾಗ್ ನಲ್ಲಿ ಪೋಸ್ಟ್ ಮಾಡಿ ಎಂದು ಕೇಳಿಕೊಂಡಿದ್ದರು.ಈ ತರಹದ ಕನ್ನಡದಲ್ಲಿ ಪ್ರಕೃತಿಯ slogan ಗಳು ಇಂಟರ್ನೆಟ್ ನಲ್ಲಿ ಕಡಿಮೆ ಸಿಗುತ್ತವೆ .ನನಗೂ ಈ ತರಹದ ಒಂದು ಪೋಸ್ಟ್ ಮಾಡಬೇಕೆಂದೆನಿಸಿ ಹಲವಾರು ಕಡೆ ಹುಡುಕಿ ಒಂದಷ್ಟು,ಹಾಗು ನಾನೇ ಯೋಚನೆ ಮಾಡಿದ ಪ್ರಕೃತಿಯ slogans ಗಳನ್ನು ಇಂದಿನ ವಿಶೇಷ ದಿನದಲ್ಲಿ ಪೋಸ್ಟ್ ಮಾಡಿದ್ದೇನೆ.ಇದು ಹಲವರಿಗೆ ಉಪಯೋಗವಾಗಬಹುದು ಎಂಬುದು ನನ್ನ ನಂಬಿಕೆ .ಇಲ್ಲಿ ಕೇವಲ 52 slogans ಗಳನ್ನು ಪೋಸ್ಟ್ ಮಾಡಿದ್ದೇನೆ.ನೀವು ಕೊಡ ಇಂತಹ ಪರಿಸರ ವಿಚಾರದ slogans ಗಳನ್ನು ರಚಿಸಿ ನನ್ನ mail id - acct4rag@gmail.com ಗೆ ಕಳುಹಿಸಬಹುದು.ನಾನು ಅವುಗಳನ್ನು ಈ list ಗೆ ಸೇರಿಸುತ್ತೇನೆ 1.‘ಕಂಡ ಕಂಡಲ್ಲಿ ಪ್ಲಾಸ್ಟಿಕ್ ಎಸೆಯುವ ನೀಚ ಬುದ್ದಿಯನ್ನು ಬಿಡಿ’ ‘ಪರಿಸರವನ್ನು ಸ್ವಚ್ಛವಾಗಿಡಿ’ 2.’ಒಂದು ಪ್ಲಾಸ್ಟಿಕ್ ಭೂಮಿಯಲ್ಲಿ ಕೊಳೆಯಲು ನೂರಾರು ವರ್ಷ ಬೇಕು’’. ‘’ಪ್ಲಾಸ್ಟಿಕ್ ನ ಮರುಬಳಕೆ ಪ್ರಕೃತಿಯಲ್ಲಿ ಪ್ಲಾಸ್ಟಿಕ್ ಹಾವಳಿ ತಡೆಯಲು ಇರುವ ಒಂದು ಉತ್ತಮ ವಿಧಾನ’’ ‘’ತಿಳಿಯಿರಿ,ತಿಳಿಸಿರಿ,ಪ್ರಕೃತಿಯನ್ನು ಉಳಿಸಿರಿ’’ 3.‘’ಪ್ರತೀ ವರ್ಷ 1 Million ಗೂ ಹೆಚ್ಚು ಪಕ್ಷಿಗಳು ಪ್ಲಾಸ್ಟಿಕ್ ಸಂಭಂದಿ ಮಾಲಿನ್ಯದಿಂದಾಗಿ ಸಾಯುತ್ತಿವೆ...
Image
-ಕಲರ್ ಫುಲ್ ನದಿ- .ವೈಶಿಷ್ಟ್ಯಗಳಿಂದಲೇ ತುಂಬಿರುವ ಸುಂದರವಾದ ಪ್ರಕೃತಿಯ ಒಂದು ವೈಶಿಷ್ಟ್ಯವೇ ಈ ಕಲರ್ ಫುಲ್ ನದಿ .ಈ ನದಿಯ ಹೆಸರು Caristales.ಇರುವ ಸ್ಥಳ ಸೌತ್ ಅಮೇರಿಕಾದಲ್ಲಿನ ಕೊಲೊಂಬಿಯದ La Macarena ನಗರದ ಸಮೀಪ .ಈ ನದಿಯನ್ನು "the river that ran away to paradise" ಅಂತಲೂ ಕರೆಯುತ್ತಾರೆ .ಬೇಸಿಗೆ ಹಾಗು ಮಳೆಗಾಲದ ನಡುವಿನ ಸಮಯದಲ್ಲಿ ಈ ನದಿಯಲ್ಲಿನ mosses ಹಾಗು algae ಗಳಿಂದಾಗಿ ನದಿಯು ಮನಮೋಹಕವಾದ ಬಣ್ಣಗಳಿಂದ ಕಂಗೊಳಿಸುತ್ತದೆ.ಈ ಸಮಯದಲ್ಲಿ ಈ ನದಿಯನ್ನು ನೋಡಲು ಎರಡು ಕಣ್ಣು ಸಾಲದು .ಸದ್ಯಕ್ಕೆ ಈ ನದಿಯ ರಮಣೀಯತೆಯನ್ನು ಚಿತ್ರಗಳಲ್ಲಿ  ನೋಡಿ  ಎಂಜಾಯ್ ಮಾಡಿ . Image Courtesy - Wonderfulinfo.com -ಪ್ರಕೃತಿಯನ್ನು ಉಳಿಸಿ-