-ಮುಂಬೈ ಜಲ ಪ್ರಳಯ -2005

.2005 ರ ಜುಲೈ 26 ರಂದು ಮುಂಬೈನಲ್ಲಿ ಸುರಿದ ಮಳೆ ಅಕ್ಷರಶಃ ಜಲ ಪ್ರಳಯವನ್ನೇ ಉಂಟು ಮಾಡಿತ್ತು

.5000 ಕ್ಕಿಂತಲೂ ಅಧಿಕ ಜನರು ಈ ಜಲ ಪ್ರಳಯದಲ್ಲಿ ತಮ್ಮ ಪ್ರಾಣವನ್ನು ಕಳೆದುಕೊಂಡರು

.ಕೇವಲ 24 ಗಂಟೆಗಳ ಅವದಿಯಲ್ಲಿ 994 mm ಮಳೆ ಸುರಿದಿತ್ತು

.ಭಾರತದಲ್ಲಿ 24 ಗಂಟೆಗಳ ಅವದಿಯಲ್ಲಿ ಸುರಿದ ದಾಖಲೆಯ ಮಳೆ Aminidivi ಎಂಭಲ್ಲಿ (1,168 mm)

.ಮುಂಬೈನಲ್ಲಿ ಅಂದು ಸುರಿದ ಭಾರಿ ಮಳೆಯಿಂದಾಗಿ ಸಾವಿರಾರು ಮಕ್ಕಳು 24 ಗಂಟೆಗಳನ್ನು ಶಾಲೆಯಲ್ಲಿ,ರಸ್ತೆಯಲ್ಲಿ ಕಳೆಯಬೇಕಾಯಿತು

.ಚರಂಡಿಗಳು ಉಕ್ಕಿ ಹರಿದ ಪರಿಣಾಮ ರಸ್ತೆಗಳಲ್ಲೆಲ್ಲಾ ಜಲಾವೃತವಾಗಿದ್ದವು

.ಸಾವಿರಾರು ಪ್ರಾಣಿಗಳ ಸತ್ತ ದೇಹಗಳು ನೀರಿನಲ್ಲಿ ತೇಲುತ್ತಿದ್ದವು

.ಈ ಕುಂಭ ದ್ರೋಣ ಮಳೆಯಿಂದಾಗಿ 450 ಕೋಟಿ ಅರ್ಥಿಕ ನಷ್ಟ ಸಂಭವಿಸಿತ್ತು

.ಸುಮಾರು 30 ಗಂಟೆಗಳ ವರೆಗೆ ಮುಂಬೈನ
ಸ್ಥಳೀಯ ಹಾಗು ಅಂತರ್ ರಾಷ್ಟ್ರೀಯ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿತ್ತು

.railway ಹಳಿಗಳು ಹಾನಿಗೊಳಗಾದ ಪರಿಣಾಮ ಆಗಸ್ಟ್ 6,2005 ರವರೆಗೆ ದೂರದ ರೈಲುಗಳ ಸಂಚಾರವನ್ನು
ಸ್ಥಗಿತಗೊಳಿಸಲಾಗಿತ್ತು

.ಸುಮಾರು 5 million ಮೊಬೈಲ್ ಗಳು ೪ ಗಂಟೆಗಳ ಕಾಲ ಸ್ತಬ್ದವಾಗಿದ್ದವು

.52 ಸ್ಥಳೀಯ ರೈಲುಗಳು
.37,೦೦೦ ಆಟೋ ರಿಕ್ಷಾಗಳು
.4,೦೦೦ taxi ಗಳು
.900 ಬಸ್ ಗಳು

ಈ ಮಳೆಯಿಂದ ಹಾನಿಗಿಡಾದವು


.ವಿದ್ಯುತ್ ಕಂಬಗಳು ದರೆಗುರುಳಿದ ಪರಿಣಾಮ ಹಲವಾರು ಜನ ವಿದ್ಯುತ್ ಶಾಕ್ ನಿಂದ ಮೃತಪಟ್ಟರು

.ಸ್ಲಂ ನಲ್ಲಿ ವಾಸವಾಗಿದ್ದ ಜನಗಳ ಬದುಕನ್ನು ಈ ಜಲ ಪ್ರಳಯ ಅಕ್ಷರಶಃ ನಾಶಮಾಡಿತು

.ಮಹಾರಾಷ್ಟ್ರ ಸರ್ಕಾರವು 2 ದಿನಗಳ ಸಾರ್ವಜನಿಕ ರಜೆ ಘೋಷಣೆ ಮಾಡಿತು

.ಸಮಾಜದ ಎಲ್ಲಾ ವರ್ಗಗಳ ಜನಗಳು ಈ ಜಲ ಪ್ರಳಯದಿಂದ ತೊಂದರೆಗೊಳಗಾದರು

.ಪ್ರಕೃತಿಯ ಬಗ್ಗೆ ಕನಿಷ್ಠ ಕಾಳಜಿ ಹಾಗು ನಗರೀಕರಣ- ಈ ಜಲ ಪ್ರಳಯಕ್ಕೆ ಪ್ರಮುಖ ಕಾರಣಗಳು

.Mithi ನದಿಯ ಆಸುಪಾಸಿನಲ್ಲಿದ್ದ mangrove ecosystems ನ ನಾಶ-ಈ ಜಲ ಪ್ರಳಯಕ್ಕೆ ಮತ್ತೊಂದು ಪ್ರಮುಖ ಕಾರಣ

.ಮುಂಬೈನ ಈ ಜಲ ಪ್ರಳಯವನ್ನು National Geographic ಚಾನೆಲ್ Documentary ಯಾಗಿ ಹೊರತಂದಿದೆ

.ಇಂದಿಗೂ ಮುಂಬೈನ ಜನ ಆ ಜಲ ಪ್ರಳಯವನ್ನು ಮರೆತಿಲ್ಲ.ಮಳೆ ಬಂತೆಂದರೆ ಈಗಲೂ ಅವರಿಗೆ ಆ ಜಲ ಪ್ರಳಯ ಒಂದು ಕ್ಷಣ ಕಣ್ಣ ಮುಂದೆ ಬಂದು ಹೋಗುತ್ತದೆ

.ಮನುಷ್ಯ ಮತ್ತು ಅವನ ಟೆಕ್ನಾಲಜಿ ಎಷ್ಟೇ ಮುಂದುವರಿದರೂ ಪ್ರಕೃತಿಯ ಮುಂದೆ ಅವೆಲ್ಲವೂ ನಗಣ್ಯ...





Share this post with your friends


Bookmark and Share

Comments

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....