-ಪುಟ್ಟ ಮರಿ ಆನೆಯನ್ನು ಅಟ್ಟಾಡಿಸಿ ಕೊಂದರು-

.ಈ ಪೋಸ್ಟ್ ನ Title ಕೆಳಿದ್ರೆನೆ ಏನೂ ಒಂತರ ಮನಸ್ಸಿಗೆ ಸಂಕಟ ಆಗತ್ತೆ

.ಹೌದು ಈ ಪಾಪಿ (ಪಾಪಿ ಅನ್ನೋದು ಕಡಿಮೆ ಆಯಿತು) ಮನುಷ್ಯನ ಕ್ರೌರ್ಯ ಮಿತಿಮೀರಿದೆ

.ಏನೂ ತಿಳಿಯದ ಒಂದು ಪುಟ್ಟ ಮರಿ ಆನೆಯನ್ನು ಈ ಕೆಟ್ಟ ಜನ ಅಸ್ಸಾಂ ನಲ್ಲಿ ಅಟ್ಟಾಡಿಸಿ ಕೊಂದಿದ್ದಾರೆ

.ತಾವು ಬೆಳೆದ ಭತ್ತದ ಗದ್ದೆ ಗೆ ಆ ಆನೆ ಬಂದದ್ದೇ ಮಾಹಾಪರಾದವೆಂದು ಭಾವಿಸಿ ಆ ಆನೆ ಮರಿಯನ್ನು 200 ಕ್ಕಿಂತಲೂ ಹೆಚ್ಚು ಹಳ್ಳಿಯ ಜನ ಅದಕ್ಕೆ ಕೋಲು,ಬಿದಿರಿನ ಬೆತ್ತ,ಹಗ್ಗಗಳಿಂದ ಕೊಡಬಾರದ ಹಿಂಸೆ ಕೊಟ್ಟು ಸಾಯಿಸಿದ್ದಾರೆ

.ಇದಕ್ಕಿಂತಲೂ ನಾಚಿಕೆ ಗೇಡಿನ ಸಂಗತಿ ಎಂದರೆ ಈ ಆನೆಯನ್ನು ಅವರು ಹೊಡೆಯುವ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿ ಮೂಕ ಪ್ರೇಕ್ಷಕರಾಗಿ ಅಲ್ಲೇ ನಿಂತಿದ್ದರು

.ನಾಚಿಕೆಯಾಗಬೇಕು ಇದಕ್ಕೆ ಸಂಭಂದ ಪಟ್ಟ ಅಧಿಕಾರಿಗಳಿಗೆ.ಈ ಘಟನೆ ನಡೆದು 5 ಘಂಟೆಯಾದರೂ (ನಾನು ಈ ಪೋಸ್ಟ್ ಮಾಡುವ ಹೊತ್ತಿಗೆ ) ಎಲ್ಲಿ ಹೋದವು ಪ್ರಾಣಿ ರಕ್ಷಣೆ ಮಾಡುವ NGO ಗಳು

.ಇತ್ತೀಚೆಗಷ್ಟೇ ಭಾರತ ಸರ್ಕಾರ ಆನೆಗೆ ವಿಶೇಷ ಸ್ಥಾನವನ್ನು ನೀಡಿದ ಬೆನ್ನಲ್ಲೇ ಈ ಘಟನೆ ನಡೆದಿರುವುದು ಇಡೀ ನಮ್ಮ ವ್ಯವಸ್ಥೆಯನ್ನೇ ತಲೆ ತಗ್ಗಿಸುವಂತೆ ಮಾಡಿದೆ

.ಅದ್ದಕ್ಕಿಂತಲೂ ಹೆಚ್ಚ್ಹಾಗಿ ಏನೂ ಅರಿಯದ ಒಂದು ಪುಟ್ಟ ಜೀವ ನರಳಿ,ನರಳಿ ಪ್ರಾಣ ಕಳೆದುಕೊಂಡಿದೆ


.ಒಂದು ಕ್ಷಣ ಯೋಚಿಸಿ,ಅದೇ ಜೀವ ನಮ್ಮ ಅಣ್ಣನೋ ,ತಮ್ಮನೋ ಅಥವಾ ನಿಮ್ಮ ಬಂದುಗಳದ್ದೇ ಆಗಿದ್ದರೆ ಹೇಗಾಗ್ತಾ ಇತ್ತು ನಮಗೆ

.ಪಾಪ ಆ ಮೂಕ ಪ್ರಾಣಿ ಅದೆಷ್ಟು ವೇದನೆ ಅನುಭವಿಸಿ ಪ್ರಾಣ ಬಿಟ್ಟಿತೂ....

.ಆ ಆನೆ ಬೆಳೆ ನಾಶ ಮಾಡುತ್ತೆ ಅಂತ ಅದನ್ನ ಕೊಂದ್ರಲ್ಲ,ಅದಕ್ಕೆ ಕಾಡಿನಲ್ಲಿ ಆಹಾರವೇ ಸಿಗದಂತೆ ಮಾಡಿದವರು ಯಾರು ?ಇದೆ ಪಾಪಿ ಮನುಷ್ಯರು

.2009 ರಲ್ಲಿ ಇದೇ ಜನ 4 ಆನೆಗಳಿಗೆ ವಿಷ ಹಾಕಿ ಕೊಂದಿದ್ದರು

.ಆ ಆನೆಗಳು ಅನುಭವಿಸಿದ ವೇದನೆಗಿಂತ ಎರಡರಷ್ಟು ವೇದನೆಯನ್ನು ಮುಂದೊಂದ್ದು ದಿನ ಇದೇ ಮನುಷ್ಯರು ಅನುಭವಿಸಬೇಕಾಗುತ್ತದೆ

.ಪ್ರಕೃತಿ ಯಾರನ್ನು ಸುಮ್ಮನ್ನೇ ಬಿಡುವುದಿಲ್ಲ...ಒಂದಲ್ಲಾ ಒಂದು ದಿನ ನಾನೇ ಮತ್ತೆ ಇಲ್ಲಿ ಮತ್ತೊಂದು ಲೇಖನ ಬರೆಯಬೇಕಾಗಬಹುದು 'ಅಸ್ಸಾಂ ನಲ್ಲಿ ಪ್ರವಾಹ,ಸಾವಿರಾರು ಜನರ ಸಾವು'........


-ಜೀವಿಸಿ,ಜೀವಿಸಲು ಬಿಡಿ .ಪ್ರಕೃತಿಯನ್ನು ಉಳಿಸಿ -


.ಈ ಘಟನೆ ಬಗ್ಗೆ ನನಗೆ ಅನ್ನಿಸಿದ್ದನ್ನ ಬರೆದಿದ್ದೇನೆ.ದಯವಿಟ್ಟು ಇದರ ಬಗ್ಗೆ ನಿಮ್ಮ ಅಭಿಪ್ರಾಯವನ್ನು Comments ನಲ್ಲಿ ಬರೆಯಿರಿ

.ಈ ಪೋಸ್ಟ್ ಅನ್ನು ಓದಿದ ನನ್ನ ಸ್ನೇಹಿತರೊಬ್ಬರು ಇನ್ನೊಂದು ಇದೇ ತರಹದ ಅಮಾನವೀಯ ಘಟನೆಯ ವೀಡಿಯೊ ದ ಲಿಂಕ್ ಅನ್ನು ಕಳಿಸಿದ್ದಾರೆ .ಇದೇ ಜನ ಒಂದು ಕರಡಿಯನ್ನು ಬಲಿ ತೆಗೆದು ಕೊಂಡಿದ್ದಾರೆ..ಇದು ಎಷ್ಟು ಸತ್ಯ ಎಷ್ಟು ಸುಳ್ಳು ಅದು ನಿಮಗೆ ಬಿಟ್ಟ ವಿಚಾರ.ಆ ವೀಡಿಯೊ ನೋಡಲು ಇಲ್ಲಿ ಕ್ಲಿಕ್ ಮಾಡಿ

Bookmark and Share

Comments

  1. Odidare kanneeru tarisuva vishaya. Tane prapanchada sarvadhikariyendu manushya tiliyuvavarege ee kraurya nadede nadeyuttade ;-(
    -Sathwik

    ReplyDelete
  2. Ide assamnalle sumaru 400 rashtu anegalannu visha haki kondiddarante. Indiatalkies.com varadi. Nijavagiyu anagarika, hesige krutya.

    ReplyDelete
  3. Hi raghu. This s nt 2 publish. I just wanted u 2 watch that video n post against it if its real. Just give bear beaten to dead in assam. It gives some results, as per d description villagers hv beaten a bear to dead 4 enterin into d village. I cudnt watch that video as m usin mob net n my set doesn't support streaming. So plz...

    ReplyDelete
  4. Thank you for your info sathwik.i watched that video.may b a real video... i vl add a link to that video in my post

    ReplyDelete

Post a Comment

Popular posts from this blog

-ವಿಶ್ವ ಪರಿಸರ ದಿನ-

-ಭಾರತದಲ್ಲಿನ ವಿಷಪೂರಿತ ಹಾವುಗಳು-

ಅಬ್ಬಬ್ಬಾ ಇದೆಂತಹಾ ಸೆಖೆ....